ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆ ವಿವಾದ : ಕೋರ್ಟ್ ತೀರ್ಪು ಒಪ್ಪಲ್ಲ
ನಗರದ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿರುವ ಶ್ರೀಗಳು, ಸೆ. 24 ರಂದು ಹೊರಬೀಳಲಿರುವ ಅಯೋಧ್ಯೆ ತೀರ್ಪಿನ ಬಗ್ಗೆ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ನಾನು ಸಹ ಅಲ್ಲಿದ್ದೆ. ಮಸೀದಿ ನೆಲಸಮ ಮಾಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅಲ್ಲಿದ್ದ ಜನಪ್ರವಾಹವನ್ನೇ ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿತ್ತು. ಇನ್ನು ಮಸೀದಿ ಧ್ವಂಸ ತಡೆಯಲು ಹೇಗೆ ಸಾಧ್ಯ ಎಂದು ಶ್ರೀಗಳು ಹೇಳಿದರು.
ಅಯೋಧ್ಯೆ ವಿಚಾರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಾಂವಿಧಾನಿಕ ಚೌಕಟ್ಟಿನಲ್ಲಿ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಲಿದ್ದೇವೆ. ಸೆ.24 ರಂದು ವಿಶ್ವ ಹಿಂದು ಪರಿಷತ್ ದೆಹಲಿಯಲ್ಲಿ ಕರೆದಿರುವ ಸಂತರ ಸಭೆಯಲ್ಲಿ ನಾನೂ ಸಹ ಪಾಲ್ಗೊಳ್ಳುತ್ತೇನೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನವಾಗಲಿದೆ ಎಂದರು.
Comments
ಪೇಜಾವರ ಮಠ ವಿಶ್ವೇಶ ತೀರ್ಥ ಸ್ವಾಮೀಜಿ ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ತೀರ್ಪು ಅಲಹಾಬಾದ್ ಹೈಕೋರ್ಟ್ pejawar mutt vishwesha teertha swamiji ayodhya babri masjid
Story first published: Wednesday, September 22, 2010, 12:20 [IST]