ರಾಮಚಂದ್ರಗೌಡರ ತಲೆದಂಡಕ್ಕೆ ಸಿಎಂ ಕಾರಣ
ಜೆಡಿಎಸ್ ಕಚೇರಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಚಂದ್ರಗೌಡರ ಇಲಾಖೆಯ ಅಕ್ರಮಗಳನ್ನು ಮಾಧ್ಯಮಗಳಿಗೆ ವ್ಯವಸ್ಥಿತವಾಗಿ ಮುಟ್ಟಿಸಿದ್ದೇ ಮುಖ್ಯಮಂತ್ರಿ ಮತ್ತು ಅವರ ಕಚೇರಿಯ ಹಿರಿಯ ಅಧಿಕಾರಿಗಳು ಎಂದೂ ಬಾಂಬ್ ಸಿಡಿಸಿದರು. ಗೌಡರನ್ನು ನೋಡಿ ಅಯ್ಯೋ ಅನ್ಸುತ್ತೆ. ಮುಖ್ಯಮಂತ್ರಿ ಆಣತಿಯಂತೆ ಅವರು ಸಭಾಪತಿ ಸ್ಥಾನವನ್ನು ಈ ಹಿಂದೆಯೇ ಅಲಂಕರಿಸಿದ್ದರೆ ಹೀಗಾಗುತ್ತಿರಲಿಲ್ಲ. ಇದರಿಂದಾಗಿ ಗೌಡರ ಮೇಲೆ ಮುಖ್ಯಮಂತ್ರಿ ದ್ವೇಷ ಸಾಧಿಸುತ್ತಲೇ ಬಂದರು.
ಕಡೆಗೆ, ಅವರನ್ನು ಕಳಂಕಿತರನ್ನಾಗಿ ಬಿಂಬಿಸಿ, ತಲೆದಂಡ ಪಡೆದರು ಎಂದ ಕುಮಾರಸ್ವಾಮಿ, ಸಂಪುಟದಲ್ಲಿ ಸಾಕಷ್ಟು ಭ್ರಷ್ಟ ಸಚಿವರು ಇದ್ದಾರೆ. ವೈದ್ಯ ಶಿಕ್ಷಣ ಇಲಾಖೆಯ 100 ಪಟ್ಟು ಹೆಚ್ಚು ಅಕ್ರಮ, ಅವ್ಯವಹಾರ ಕೆಲವೊಂದು ಇಲಾಖೆಗಳಲ್ಲಿ ನಡೆಯುತ್ತಿದೆ. ಈ ಇಲಾಖೆಗಳ ಸಚಿವರನ್ನೂ ಮುಖ್ಯಮಂತ್ರಿ ಸಂಪುಟದಿಂದ ಕೈಬಿಡಲಿ ಎಂದೂ ಆಗ್ರಹಿಸಿದರು.
ಮಡಿಕೇರಿಯಲ್ಲಿ ನಕಲಿ ಔಷಧ ಸೇವನೆಯಿಂದ ಮೂವರು ಮೃತಪಟ್ಟಿದ್ದಾರೆ. ಈ ಬಗ್ಗೆ ಗಮನಹರಿಸದ ಆರೋಗ್ಯ ಸಚಿವ ಶ್ರೀರಾಮುಲು-ನನ್ನ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗೆ ಧೈರ್ಯ ಇದ್ದರೆ, ತಮ್ಮ ಇಲಾಖೆಯನ್ನು ಸರಿಯಾಗಿ ನಿರ್ವಹಿಸಲು ಪರದಾಡುತ್ತಿರುವ ಶ್ರೀರಾಮುಲು ರಾಜೀನಾಮೆಯನ್ನು ಪಡೆದುಕೊಳ್ಳಲಿ ಎಂದೂ ಸವಾಲೆಸೆದರು.