ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಗೌಡರ ತಲೆದಂಡಕ್ಕೆ ಸಿಎಂ ಕಾರಣ

By Mrutyunjaya Kalmat
|
Google Oneindia Kannada News

HD Kumaraswamy
ಬೆಂಗಳೂರು, ಸೆ. 21 : ರಾಮಚಂದ್ರಗೌಡರ ತಲೆದಂಡಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡ ಷಡ್ಯಂತ್ರವನ್ನೇ ರಚಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಚಂದ್ರಗೌಡರ ಇಲಾಖೆಯ ಅಕ್ರಮಗಳನ್ನು ಮಾಧ್ಯಮಗಳಿಗೆ ವ್ಯವಸ್ಥಿತವಾಗಿ ಮುಟ್ಟಿಸಿದ್ದೇ ಮುಖ್ಯಮಂತ್ರಿ ಮತ್ತು ಅವರ ಕಚೇರಿಯ ಹಿರಿಯ ಅಧಿಕಾರಿಗಳು ಎಂದೂ ಬಾಂಬ್ ಸಿಡಿಸಿದರು. ಗೌಡರನ್ನು ನೋಡಿ ಅಯ್ಯೋ ಅನ್ಸುತ್ತೆ. ಮುಖ್ಯಮಂತ್ರಿ ಆಣತಿಯಂತೆ ಅವರು ಸಭಾಪತಿ ಸ್ಥಾನವನ್ನು ಈ ಹಿಂದೆಯೇ ಅಲಂಕರಿಸಿದ್ದರೆ ಹೀಗಾಗುತ್ತಿರಲಿಲ್ಲ. ಇದರಿಂದಾಗಿ ಗೌಡರ ಮೇಲೆ ಮುಖ್ಯಮಂತ್ರಿ ದ್ವೇಷ ಸಾಧಿಸುತ್ತಲೇ ಬಂದರು.

ಕಡೆಗೆ, ಅವರನ್ನು ಕಳಂಕಿತರನ್ನಾಗಿ ಬಿಂಬಿಸಿ, ತಲೆದಂಡ ಪಡೆದರು ಎಂದ ಕುಮಾರಸ್ವಾಮಿ, ಸಂಪುಟದಲ್ಲಿ ಸಾಕಷ್ಟು ಭ್ರಷ್ಟ ಸಚಿವರು ಇದ್ದಾರೆ. ವೈದ್ಯ ಶಿಕ್ಷಣ ಇಲಾಖೆಯ 100 ಪಟ್ಟು ಹೆಚ್ಚು ಅಕ್ರಮ, ಅವ್ಯವಹಾರ ಕೆಲವೊಂದು ಇಲಾಖೆಗಳಲ್ಲಿ ನಡೆಯುತ್ತಿದೆ. ಈ ಇಲಾಖೆಗಳ ಸಚಿವರನ್ನೂ ಮುಖ್ಯಮಂತ್ರಿ ಸಂಪುಟದಿಂದ ಕೈಬಿಡಲಿ ಎಂದೂ ಆಗ್ರಹಿಸಿದರು.

ಮಡಿಕೇರಿಯಲ್ಲಿ ನಕಲಿ ಔಷಧ ಸೇವನೆಯಿಂದ ಮೂವರು ಮೃತಪಟ್ಟಿದ್ದಾರೆ. ಈ ಬಗ್ಗೆ ಗಮನಹರಿಸದ ಆರೋಗ್ಯ ಸಚಿವ ಶ್ರೀರಾಮುಲು-ನನ್ನ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗೆ ಧೈರ್ಯ ಇದ್ದರೆ, ತಮ್ಮ ಇಲಾಖೆಯನ್ನು ಸರಿಯಾಗಿ ನಿರ್ವಹಿಸಲು ಪರದಾಡುತ್ತಿರುವ ಶ್ರೀರಾಮುಲು ರಾಜೀನಾಮೆಯನ್ನು ಪಡೆದುಕೊಳ್ಳಲಿ ಎಂದೂ ಸವಾಲೆಸೆದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X