ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ಬೀದಿ ನಾಯಿಗಳಿಗೆ ಬಾಲಕ ಬಲಿ

By Prasad
|
Google Oneindia Kannada News

Stray dogs kill boy in Belakere, Mysore
ಮೈಸೂರು, ಸೆ. 20 : ಮೂರು ವರ್ಷದ ಬಾಲಕನನ್ನು ನಾಲ್ಕು ನಾಯಿಗಳು ಕಚ್ಚಿ ಕೊಂದಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಬೆಳಕೆರೆ ಗ್ರಾಮದಲ್ಲಿ ಇಂದು ಜರುಗಿದೆ.

ಬೆಳಗಿನ ಜಾವದಲ್ಲಿ ನಾಗೇಂದ್ರ ಎಂಬ ಪುಟ್ಟ ಬಾಲಕ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಒಂದು ನಾಯಿ ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಸ್ವಲ್ಪ ದೂರ ಎಳೆದೊಯ್ದಿದೆ.

ಬಾಲಕನ ಆಕ್ರಂದನ ಕೇಳಿ ನೆರೆಹೊರೆಯವರೆಲ್ಲ ಬೀದಿಗೆ ಧಾವಿಸಿ ಬಂದಿದ್ದಾರೆ. ನಾಯಿಗಳನ್ನು ದೂರ ಅಟ್ಟಲು ಜನರು ಯಶಸ್ವಿಯಾದರೂ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ನಾಗೇಂದ್ರ, ಮೂರ್ತಿ ಮತ್ತು ಚಂದ್ರಕಲಾ ಅವರ ಏಕೈಕ ಮಗ.

ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಕಸಾಯಿ ಅಂಗಡಿಗಳನ್ನು ಹಳ್ಳಿಯಿ ಹೊರವಲಯದಲ್ಲಿ ಸಾಗಿಸಬೇಕು ಎಂದು ಆಗ್ರಹಿಸಿದರು. ಮಾಂಸದ ಅಂಗಡಿಗಳಿದ್ದರಿಂದಲೇ ನಾಯಿಗಳೆಲ್ಲ ಸುತ್ತಮುತ್ತಲೇ ಬೀಡುಬಿಟ್ಟಿದ್ದು, ಅವುಗಳ ಉಪಟಳ ಮಿತಿಮೀರಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X