ಇದು ವಿಶಾಲ ಭಾರತ, ಸ್ವಾಮೀ!
- ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ.
*
ಪಂಡಿತ
ಪುಟ್ಟರಾಜ
ಗವಾಯಿಗಳನ್ನು
ನೋಡಲು
ಜನಸಾಗರ.
-
ನಿಜವಾದ
ಸೂಪರ್
ಸ್ಟಾರ್
ಎಂದರೆ
ಗವಾಯಿಗಳು.
ಇದು
ಜನರ
ಆಯ್ಕೆ.
*
ರಾಜ್ಯದ
ಪರಿಶಿಷ್ಟರಿಗೆ
ಭೂಮಿ.
-
ಶಿಷ್ಟರಿಗೆ,
ಪರಿಶಿಷ್ಟರಿಗೆ
ತುಂಡು
ಭೂಮಿ.
ಭ್ರಷ್ಟರಿಗೆ,
ದುಷ್ಟರಿಗೆ
ನುಂಗಿದಷ್ಟೂ
ಭೂಮಿ!
*
ಬನ್ನೇರುಘಟ್ಟ
ಉದ್ಯಾನದಲ್ಲಿ
ಹುಲಿ,
ಸಿಂಹಗಳ
ಸಾವು.
-
ಹುಲಿ
ರಕ್ಷಣೆಗೆ
ಹತ್ತು
ಕೋಟಿ,
ಸಿಂಹಕ್ಕೆ
ಇಪ್ಪತ್ತು
ಕೋಟಿ
ಘೋಷಿಸಿಲ್ಲ
ಸಿ.ಎಂ.
ಇನ್ನೂ!
*
ರಾಜ್ಯದ
ಕೆಲವೆಡೆ
ಆನೆಗಳ
ಹಾವಳಿ
ಮಿತಿಮೀರಿದೆ.
-
ಮುವ್ವತ್ತು
ಕೋಟಿ?
*
ಪ್ರಕೃತಿ
ವಿಕೋಪ
ನಿಧಿ
ಬಳಸಿಕೊಂಡು
(ಮಾಜಿ)
ಜಿಲ್ಲಾಧಿಕಾರಿಯಿಂದ
ಬಂಗಲೆ
ನಿರ್ಮಾಣ.
-
ಅದು
ಆ
ಅಧಿಕಾರಿಯ
ಪ್ರಕೃತಿ.
ಕೋಪ
ಅನವಶ್ಯ.
*
ರಾಮಚಂದ್ರಗೌಡರನ್ನೀಗ
ಕೇಳೋರಿಲ್ಲ.
-
ಆದ್ದರಿಂದ
ಹರಿಕಥೆ
ಸ್ಟಾಪ್?
*
ಅಂದು
ರಾಮಾಯಣ,
ಇಂದು
ರಾಮಚಂದ್ರಾಯಣ.
-
ಗೌಡಾಯಣ
ಅಲ್ಲ.
ಏಕೆಂದರೆ
ಅದು
ಬೇರೆಯವರಿಗೆ
ರಿಸರ್ವ್
ಆಗಿದೆ.
*
ಹರತಾಳು
ಹಾಲಪ್ಪ
ಮಾಡಿದ್ದು
ಖಾತ್ರಿಯಾಗಿದೆ.
-
ಇನ್ನು,
ಮಾಡಿದ್ದುಣ್ಣೋ
ಮಹರಾಯ.
*
ತೆಲಗಿ
ದೋಷಿ
ಎಂದು
ನ್ಯಾಯಾಲಯದ
ತೀರ್ಪು.
-
ಆಸ್ತಿ
ನಮ್ಮ
ಮಾವನ
ಸ್ವಂತದ್ದು
ಎಂದು
ಅದೇ
ದಿನ
ತೆಲಗಿಯ
ಭಾವೀ
ಅಳಿಯನ
ಘೋಷಣೆ!
*
ವಿದ್ಯುತ್
ಕಡಿತ
ಮುಂದುವರಿಯಲಿದೆ.
-
ಇದೂ
ಒಂದು
ಸುದ್ದಿಯೇ?
*
ಮಾದಾರ
ಚನ್ನಯ್ಯ
ಸ್ವಾಮೀಜಿ
ಪಾದಯಾತ್ರೆ
ಯಶಸ್ವಿ.
-
ಇದು
ನಿಜಕ್ರಾಂತಿಗೆ
ಮುನ್ನುಡಿಯಾದರೆ
ಚೆನ್ನಯ್ಯ.
*
ಶ್ರೀನಗರದಲ್ಲಿ
ನಿಲ್ಲದ
ಹಿಂಸಾಚಾರ.
-
ಹೀಗೇ
ಮುಂದುವರಿದರೆ
ಕೊನೆಗೊಂದು
ದಿನ
ಅದು
ಇತಿಶ್ರೀ
ನಗರ!
*
ಕುಸ್ತಿ
ಕೋಚ್
ಸತ್ಪಾಲ್
ಸಿಂಗ್
ಅವರನ್ನು
ಅವಮಾನಿಸಿದ
ಕ್ರೀಡಾ
ಸಚಿವ
ಗಿಲ್.
-
'ಗಿಲ್ಲು
ಗಿಲ್ಲೆನುತಾ,
ಎಂ.ಎಸ್.
ಗಿಲ್ಲೇ
ತಾನೆನುತಾ,
ಬಲ್ಲಿದ
ಸತ್ಪಾಲ್
ಸಿಂಗರಮೇಲೆ
ಚೆಲ್ಲಿದನೋ
ಕೆಸರಾ!'
*
ಒಂದೇ
ದಿನದಲ್ಲಿ
ಇಷ್ಟೆಲ್ಲ
ಸುದ್ದಿ!
-
ಇದು
ವಿಶಾಲ
ಭಾರತ,
ಸ್ವಾಮೀ!