ಶ್ವೇತಭವನ ಮುಂದೆ ಕುರಾನ್ ಹರಿದಿದ್ದು ತಪ್ಪು
'ಈ ರೀತಿಯ ದುಷ್ಕೃತ್ಯದಲ್ಲಿ ಪಾಲ್ಗೊಂಡವರು ಅಮೆರಿಕದವರಲ್ಲ ಹಾಗೂ ಅಮೆರಿಕದ ಸಂಸ್ಕೃತಿಯ ಬಗ್ಗೆ ತಿಳಿದವರಂತೂ ಅಲ್ಲವೇಅಲ್ಲ. ಇದು ಅಮಾನವೀಯ ಕೃತ್ಯ. ಬಲಾತ್ಕಾರವಾಗಿ ಅನ್ಯಧರ್ಮದ ಪವಿತ್ರಗ್ರಂಥವನ್ನು ಹಾಳುಗೆಡುವುದು ಹೇಯಕೃತ್ಯ' ಎಂದು ಖಂಡಿಸಿದ್ದಾರೆ.
ಅಮೆರಿಕದಲ್ಲಿ ಗರ್ಭಪಾತದ ವಿರುದ್ಧ ಅಭಿಯಾನವನ್ನು ಹಮ್ಮಿಕೊಂಡು ಹೆಸರುವಾಗಿದ್ದ ರಂಡಾಲ್ ಟೆರ್ರಿ ಈಗ, ಕುರಾನ್ ಹರಿದುಹಾಕಿದ ಗುಂಪಿನ ವಕ್ತಾರನಾಗಿದ್ದು, ಇಸ್ಲಾಮ್ ವಿರುದ್ಧದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾನೆ. ಇಸ್ಲಾಂ ಶಾಂತಿಪೂರ್ಣ ಮತ ಎಂಬ ಭ್ರಮೆಯನ್ನು ತೆಗೆದುಹಾಕಿ ಎಂದು ಆತ ಮನವಿ ಮಾಡಿದ್ದಾನೆ.
ಪ್ರತಿಭಟನಕಾರರು ಕುರಾನಿನಲ್ಲಿ ಕ್ರೈಸ್ತ, ಯಹೂದಿ ಮತಗಳ ವಿರುದ್ಧ ದ್ವೇಷ ಇರುವುದನ್ನು ಉಲ್ಲೇಖಿಸಿ, ಈ ದ್ವೇಷದ ವಿಚಾರಗಳಿಂದಲೇ 9/11 ಅನಾಹುತ ಸಂಭವಿಸಿದ್ದು ಎಂದು ಹೇಳಿದ್ದಾರೆ. ವಿಶ್ವ ವ್ಯಾಪಾರ ಕೇಂದ್ರ ಮೇಲಿನ ದಾಳಿಯ 9ನೇ ವರ್ಷಾಚರಣೆ ಸಂದರ್ಭ ಕುರಾನ್ ಹರಿದು ಹಾಕುವ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸರು ಹಾಜರಿದ್ದರೂ ಪ್ರತಿಭಟನಾಕಾರರನ್ನು ತಡೆಯುವ ಯಾವುದೇ ಯತ್ನ ಮಾಡಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ.