ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಧ್ಯಮಗಳ ವಿರುದ್ಧ ಕಿಡಿಕಾರಿದ ರಾಮಚಂದ್ರಗೌಡ
ಬೆಂಗಳೂರು ನಗರ ಜಿಪಂ ಉತ್ತರ ತಾಲೂಕು ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಹಾಸನ ಮತ್ತು ಮೈಸೂರು ಮೆಡಿಕಲ್ ಕಾಲೇಜುಗಳ ಹಗರಣಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಪ್ರತಿದಿನ ಮಾಧ್ಯಮಗಳಲ್ಲಿ ರಾಮಚಂದ್ರಗೌಡರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎಂಬ ಆರೋಪಗಳನ್ನೊಳಗೊಂಡ ಸುದ್ದಿಗಳು ಪ್ರಕಟಗೊಳ್ಳುತ್ತಿವೆ. ಇಲ್ಲ ಸಲ್ಲದ ಆರೋಪಗಳು, ಟೀಕೆಗಳನ್ನು ಮಾಡಲಾಗುತ್ತಿದ್ದು, ವಿನಾಕಾರಣ ತನ್ನನ್ನು ಕೆಣಕಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಶಿಕ್ಷಕರ ದಿನಾಚರಣೆಯನ್ನು ಅವರಿಗೆ ಗೌರವ ಸೂಚಿಸುವ ಸಲುವಾಗಿ ಇಡೀ ಸಮಾಜವೇ ಆಚರಿಸುವಂತಾಗಬೇಕು ಎಂದು ರಾಮಚಂದ್ರಗೌಡ ಶಿಕ್ಷಕರ ದಿನಾಚರಣೆ ಸಭೆಯಲ್ಲಿ ಹೇಳಿದರು.
Comments
ರಾಮಚಂದ್ರಗೌಡ ವೈದ್ಯಕೀಯ ಕಾಲೇಜು ಹಾಸನ ಮೈಸೂರು ಮಾಧ್ಯಮ ramachandra gowda hassan mysore media electronic media
Story first published: Monday, September 6, 2010, 17:15 [IST]