ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಸಲರಿಗೆ ಎಡಪಕ್ಷಗಳ ಬೆಂಬಲವಿಲ್ಲ: ಯೆಚೂರಿ
ಸೇಲಂನಲ್ಲಿ ನಡೆದ ಪಕ್ಷದ ಬಹಿರಂಗ ಮೆರವಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಡಪಕ್ಷಗಳ ಆಡಳಿತವಿರುವ ಎಲ್ಲ ರಾಜ್ಯಗಳಲ್ಲೂ ನಕ್ಸಲಿಸಂನ್ನು ನಿಷೇಧಿ ಸಲಾಗಿದೆ. ಕರುಣಾನಿಧಿಯಂತಹ ಅನುಭವಿ ರಾಜಕಾರಣಿಯಾದವರು, ಇಂತಹ ಅಸತ್ಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಹುಶ: ಕರುಣಾನಿಧಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕೆಂದು ವ್ಯಂಗ್ಯವಾಡಿದ ಅವರು, ಹಿಂಸೆ ಮಾರ್ಗದಲ್ಲಿ ಹೋಗುವ ನಕ್ಸಲರನ್ನು ಎಂದಿಗೂ ನಾವು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು. ಭಾರತದ ಮಾವೋವಾದಿಗಳಿಗೆ ರಾಷ್ಟ್ರದ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಳ್ಳಷ್ಟು ನಂಬಿಕೆಯಿಲ್ಲ. ಆದರೆ ಎಡಪಕ್ಷಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹಾಗೂ ಗೌರವವಿದೆ ಎಂದು ಯೆಚೂರಿ ಸ್ಪಷ್ಟಪಡಿಸಿದರು.
Comments
ನಕ್ಸಲ್ ಎಡಪಕ್ಷ ಮಾವೋವಾದಿ ಸೀತಾರಾಂ ಯೆಚೂರಿ ಕರುಣಾನಿಧಿ ತಮಿಳುನಾಡು ಸೇಲಂ ಸಿಪಿಐಎಂ cpim maoist sitaram yechury karunanidhi tamil nadu salem
Story first published: Monday, September 6, 2010, 10:53 [IST]