ಗೋಹತ್ಯೆ ಕಾಯ್ದೆ ವಿರೋಧಿಗಳು ಕ್ರಿಮಿನಲ್ಸ್
ಭಾರತರತ್ನ ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ 40ರ ಪರಿಚ್ಛೇದದ ಅಡಿ ಯಲ್ಲಿಯೇ ಜಾನುವಾರುಗಳ ಹತ್ಯೆ ನಿಷೇಧ ಕಾಯ್ದೆ ರೂಪಿಸಲಾಗಿದೆ. ಇದು ಸಂವಿಧಾನ ಬದ್ಧವಾಗಿದೆ. ಅಲ್ಲದೇ ಈ ವಿವಾದ ಸುಪ್ರೀಂ ಕೋರ್ಟ್ಗೂ ಹೋಗಿದ್ದರಿಂದ ಕಾಯ್ದೆಯ ಪರವಾಗಿ ತೀರ್ಪು ಬಂದಿದೆ. ಆದರೂ, ಈ ಕಾಯ್ದೆ ಯನ್ನು ವಿರೋಧಿಸುವವರು ಸಂವಿಧಾನ ವಿರೋಧಿಗಳು ಎಂದು ಜರಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಅವರು ಈ ಕಾಯ್ದೆಯನ್ನು ವಿರೋಧಿ ಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಮುಸ್ಲಿಂರೇ ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಯನ್ನು ಜಾರಿಗೆ ತರಲಾಗಿದೆ. ಅಲ್ಲಿ ಗೋಹತ್ಯೆ ಮಾಡಿದಲ್ಲಿ 10 ವರ್ಷಗಳ ಕಾಲ ಗೋಹತ್ಯೆ ಬೆಂಬಲಿಗರು ಸಂವಿಧಾನ ವಿರೋಧಿಗಳು-ಆಚಾರ್ಯ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ.
ಸುಮಾರು 7 ರಾಜ್ಯಗಳಲ್ಲಿ ಈಗಾಗಲೇ ಈ ಕಾಯ್ದೆ ಜಾರಿಗೆ ಬಂದಿದೆ. 8ನೇ ರಾಜ್ಯವಾಗಿ ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ಬರಲಿದೆ. ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಅಸಮರ್ಥ ಗೃಹ ಸಚಿವ ಎಂಬುದನ್ನು ಅಲ್ಲಗಳೆದ ಅವರು, ರಾಜ್ಯದಲ್ಲಿ ಭಯೋತ್ಪಾದಕರ ನಿಗ್ರಹ, ನಕ್ಸಲಿಯರ ನಿಗ್ರಹ ಸೇರಿದಂತೆ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಕೈಗೊಂಡ ಕ್ರಮಗಳಿಂದಾಗಿ ಇಡೀ ದೇಶದಲ್ಲಿಯೇ ಕರ್ನಾಟಕ ನಂಬರ್ ಒನ್ ಇದೆ. ಅಲ್ಲದೇ ಕೇಂದ್ರದ ಪ್ರಮುಖರು ಸಹ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳನ್ನು ಶ್ಲಾಘಿಸಿದ್ದಾರೆ ಎಂದು ಅವರು ಹೇಳಿದರು.
ಪಿಎಫ್ಡಿ ಅಧ್ಯಕ್ಷ ಮದನಿ ಬಂಧನದ ಕುರಿತು ತಿಳಿಸಿದ ಅವರು, ಈಗಾಗಲೇ ಆತನನ್ನು ತನಿಖೆಗೆ ಒಳಪಡಿಸಲಾಗಿದೆ. ಇನ್ನು ಆತನ ವಿರುದ್ಧ 8 ಪ್ರಕರಣಗಳಿದ್ದು, ಆ ಕುರಿತು ಸಹ ತನಿಖೆ ನಡೆಯುತ್ತಿದೆ ಎಂದರು.