ನೇತ್ರದಾನ ಜಾಗೃತಿ ಅಂಧರೊಡನೆ ಶ್ರೀಶಾಂತ್ ನಡಿಗೆ
ಇಂಡಿಯನ್ ಡಿಸೆಬಲ್ಡ್ ಲೀಗ್ (IDL) ಫೌಂಡೇಷನ್ ಎಂಬ ಲಾಭರಹಿತ ಸರ್ಕಾರೇತರ ಸಂಸ್ಥೆ(NGO) ತನ್ನ 7ನೇ ವಾರ್ಷಿಕೋತ್ಸವವನ್ನು ಈ ಮೂಲಕ ಆಚರಿಸಿಕೊಳ್ಳುತ್ತಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಮತ್ತಿಕೆರೆಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಡಿಜಿ , ಐಜಿಪಿ ಅಜಯ್ ಕುಮಾರ್ ಸಿಂಗ್ ಅವರು ಒಂದು ಕಿ.ಮೀ ದೂರ ಸಾಗುವ ವಿಶಿಷ್ಟ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಹಲವಾರು ರಾಜಕೀಯ ನಾಯಕರುಗಳು, ಕಾರ್ಪೊರೇಟರ್ ಗಳು, ಗಣ್ಯರುಗಳು ಸ್ವಯಂಪ್ರೇರಿತರಾಗಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ, ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸಹಕರಿಸಲಿದ್ದಾರೆ ಎಂದು ಐಡಿಎಲ್ ಫೌಂಡೇಷನ್ ನ ಸ್ಥಾಪಕ ಹಾಗು ಕಾರ್ಯಕಾರಿ ಟ್ರಸ್ಟಿ ಪಿಕೆ ಪೌಲ್ ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿದ ನೇತ್ರಹೀನರಿಗೆ ವಿಶೇಷ ಗಡಿಯಾರಗಳನ್ನು ನೀಡಲಾಗುವುದು. ಸಾರ್ವಜನಿಕರು ಈ ಪಾದಯಾತ್ರೆಗೆ ಮನಃಪೂರ್ವಕವಾಗಿ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಪೌಲ್ ಆಶಿಸುತ್ತಾರೆ.
ನಾರಾಯಣ ನೇತ್ರಾಲಯದ ಡಾ. ರಾಜ್ ಕುಮಾರ್ ನೇತ್ರದಾನ ಬ್ಯಾಂಕ್ ಜೊತೆಗೂಡಿ ಸಂಗೀತಾಸಕ್ತ ಅಂಧರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಐಡಿಎಲ್ ಫೌಂಡೇಷನ್ ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.