ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಬಜೆಟ್ ನಲ್ಲಿ ಏನೇನಿದೆ?

By Mahesh
|
Google Oneindia Kannada News

Bangalore budget focuses on city infrastructure
ಬೆಂಗಳೂರು, ಆ.30: ಸುಮಾರು ನಾಲ್ಕು ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಆರಂಭವಾದ ಮೇಲೆ ಬಹುನಿರೀಕ್ಷಿತ ಮಹಾನಗರ ಪಾಲಿಕೆ ಬಜೆ ಟ್ ಅನ್ನು ಇಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸದಾಶಿವ ಮಂಡಿಸಿದರು.

ಸುಮಾರು 8,488 ಕೋಟಿ ರುಗಳ ಬಜೆಟ್ ನಲ್ಲಿ ಆಡಳಿತಕ್ಕೆ ಶೇ.2, ಆರೋಗ್ಯಕ್ಕೆ 4, ಶಿಕ್ಷಣ-ಸಂಸ್ಕೃತಿ-ಕ್ರೀಡೆಗೆ ಶೇ.1, ಸಾಲ ಮರುಪಾವತಿಗೆ ಶೇ.7 ಹಾಗೂ ನಿರ್ವಹಣೆಗೆ ಶೇ6 ರಷ್ಟು ಅನುದಾನ ಮೀಸಲಿಟ್ಟುಎಲ್ಲಾ ವಲಯಗಳಲ್ಲಿ ಸಮಸ್ಥಿತಿ ಕಾಯ್ದುಕೊಂಡ ಬಜೆಟ್ ಎನಿಸಿದೆ.

ಹತ್ತು ಹಲವು ಹೊಸ ಕಾರ್ಯಕ್ರಮ, ಯೋಜನೆಗಳ ಘೋಷಣೆಗಳೊಂದಿಗೆ ಬಿಬಿಎಂಪಿ ಬಜೆಟ್ ಜನಮೆಚ್ಚುಗೆ ಬಜೆಟ್ ಎನ್ನಿಸುವ ಎಲ್ಲಾ ಸಾಧ್ಯತೆಗಳಿವೆ. ಬಜೆಟ್ ನ ಪ್ರಮುಖಾಂಶಗಳು ಇಂತಿದೆ:

ಆರೋಗ್ಯ:
* ಹೆಚ್ 1 ಎನ್ 1 ಸೇರಿದಂತೆ ಎಲ್ಲಾ ಬಗೆಯ ಸಾಂಕ್ರಾಮಿಕ ರೋಗಗಳ ತಡೆ,ನಿಯಂತ್ರಣಕ್ಕೆ ನಾಲ್ಕು ಕೋಟಿ
* ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆ, ಆರೋಗ್ಯ ಜಾಗೃತಿ ಲಿಂಕ್ ಆಫೀಸರ್ ನೇಮಕ
* ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಸೌಲಭ್ಯ (ಖಾಸಗಿ ಸಹಭಾಗಿತ್ವದಲ್ಲಿ )
* ಬಿಬಿಎಂಪಿ ವ್ಯಾಪ್ತಿಗೆ ಸೇರಿದ ತಾಯಿ-ಮಡಿಲು ಉಚಿತ್ ಕಿಟ್ ಯೋಜನೆ
*ಹೊಸಕೆರೆಹಳ್ಳಿ ಆಸ್ಪತ್ರೆ ಆಧುನೀಕರಣಕ್ಕೆ 2 ಕೋಟಿ ರು.

ನಾಗರೀಕ ಸೌಲಭ್ಯ ಯೋಜನೆಗಳು
* ಬೀದಿ ನಾಯಿಗಳ ನಿರ್ಮೂಲನೆಗಾಗಿ 19 ಪ್ಯಾಕೆಜ್ ನಡಿ 5 ಕೋಟಿ ವೆಚ್ಚ.
* ರೇಬೀಸ್ ರೋಗ ತಡೆಗೆ 4 ಕೋಟಿ ರು.
* ಬೀದಿ ದೀಪಗಳ ಅಳವಡಿಕೆಗೆ 30 ಕೋಟೀ ರು. ಎಲ್ ಇಡಿ ದೀಪಗಳ ಅಳವಡಿಕೆಗೆ 2 ಕೋಟಿ ರು.
* ಪ್ರತಿ ಕಂಪೆನಿಗಳು ಇ ತ್ಯಾಜ್ಯ ನಿರ್ವಹಣೆ ಘಟಕ ಹೊಂದುವುದು ಕಡ್ಡಾಯ.
* ಏಳು ವಿವಿಧ ಹಂತದ ಪಾರ್ಕಿಂಗ್ ವ್ಯವಸ್ಥೆ ಕಟ್ಟಡಗಳು.

ಕ್ರೀಡೆ- ಸಂಸ್ಕೃತಿ
* ಕಬಡ್ಡಿ, ವಾಲಿಬಾಲ್ ಕ್ರೀಡೆ ಪ್ರೋತ್ಸಾಹಕ್ಕಾಗಿ ಮೇಯರ್ ಕಪ್ ಕ್ರೀಡಾಕೂಟ ಆಯೋಜನೆ
*ಕಲೆ, ಇತಿಹಾಸ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಪಾರಂಪರಿಕ ತಾಣ ರಕ್ಷಣಾ ಕೋಶ ಅಸ್ತಿತ್ವಕ್ಕೆ ತರಲು ನಿರ್ಧಾರ.
* ಬಸವನಗುಡಿ ಈಜುಕೊಳ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 100 ಕೋಟಿ ರು.
* ನಗರದ ವಿವಿಧೆಡೆ ಮೂರು ಅತ್ಯಾಧುನಿಕ ಈಜುಕೊಳ ನಿರ್ಮಾಣಕ್ಕೆ 8.50 ಕೋಟಿ ರು.
* ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ ಅನಾವರಣಕ್ಕೆ 25 ಲಕ್ಷ ರು.

ಶಿಕ್ಷಣ:
* ನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಭವನ ನಿರ್ಮಾಣಕ್ಕೆ 1.5 ಕೋಟಿ ರು.
* ಬಿಬಿಎಂಪಿ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ವೆಟ್ಟರ್.
* ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ಅಭಿವೃದ್ಧಿಗೆ ಒತ್ತು. ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಯೋಜನೆ.

ಹಿಂದುಳಿದ ವರ್ಗಗಳ ಕಲ್ಯಾಣ: ಎಸ್ಸಿ/ಎಸ್ಟಿ ವರ್ಗಗಳ ಕಲ್ಯಾಣಕ್ಕೆ 162 ಕೋಟಿ ರು ಅನುದಾನ ಉಳಿಸಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಸಾಲ ಆಧಾರಿತ ಸಹಾಯ ಧನ, ಸ್ವಯಂ ಉದ್ಯೋಗ ಉಪಕರಣ ಕಿಟ್ ಮತ್ತು ಶಿಶುಪಾಲನ ಕೇಂದ್ರ ಸ್ಥಾಪನೆ.
* ಪಂಡಿತ್ ದೀನ್ ದಯಾಳ್ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ವಿಮೆ ಯೋಜನೆಗಾಗಿ 20.88 ಕೋಟಿ ರು ಮೀಸಲು.
* ವಿಕಲಚೇತನರ ನಿಧಿಗೆ 10 ಕೋಟಿ ರು.
* ಮಹಿಳಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗೆ 20 ಕೋಟಿ ರು
* ಆರ್ಥಿಕವಾಗಿ ಹಿಂದುಳಿದ ಪೇಪರ್ ಹಾಗೂ ಹಾಲು ಮಾರುವವರಿಗೆ 7 ಕೋಟಿ ರು ವೆಚ್ಚದಲ್ಲಿ ಪ್ರತಿ ವಾರ್ಡ್ ಗೆ 100 ರಂತೆ 20 ಸಾವಿರ ಸೈಕಲ್ ವಿತರಣೆ.

ಇನ್ನಿತರ ಯೋಜನೆಗಳು:

* ನೌಕರರ ಹಾಜರಾತಿಯಲ್ಲಿ ಶಿಸ್ತು ರೂಪಿಸಲು ಬಯೋಮೆಟ್ರಿಕ್ ವ್ಯವಸ್ಥೆ.
* ಸ್ವಯಂ ಚಾಲಿತ ನಕ್ಷೆ ಮಂಜೂರಾತಿ ವಿಧಾನ ಅಳವಡಿಕೆ
* ಅಕ್ರಮ ಸಕ್ರಮ ಯೋಜನೆಯಿಂದ 750 ಕೋಟಿ ರು ಸಂಗ್ರಹದ ಗುರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X