ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರೀಡಾಂಗಣ ಸ್ಫೋಟ :ಮದನಿ ಕೈವಾಡ ಇಲ್ಲ
ಸರಣಿ ಬಾಂಬ್ ಸ್ಫೋಟದಲ್ಲಿ ಮದನಿ ಪತ್ನಿ ಸೋಫಿಯಾ ಭಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆಕೆಯನ್ನು ಕರೆತಂದು ವಿಚಾರಣೆ ನಡೆಸಿದಾಗ ಮದನಿ ಕೈವಾಡವಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿ, ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಸದ್ಯಕ್ಕೆ ಸರಣಿ ಸ್ಫೋಟ ಪ್ರಕರಣ ಕುರಿತು ಮದನಿ ವಿಚಾರಣೆ ನಡೆಯುತ್ತಿದ್ದು, ಪೊಲೀಸ್ ವಶದಲ್ಲಿರುವ ಮದನಿ ಅವಧಿ ಆ.26ಕ್ಕೆ ಅಂತ್ಯವಾಗಲಿದೆ. ಅಗತ್ಯ ಬಿದ್ದಲ್ಲಿ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ ವಿಚಾರಣೆ ಅವಧಿ ವಿಸ್ತರಿಸಲಾಗುವುದು ಎಂದು ಶಂಕರ್ ಬಿದರಿ ಹೇಳಿದರು. ಮದನಿಯನ್ನು ಕೊಲ್ಲಂನಲ್ಲಿ ಆ.17ರಂದು ಬಂಧಿಸಿ, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಏಪ್ರಿಲ್ 17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣ(KSCA)ದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಮೈದಾನದ ಹೊರಗೆ ಎರಡು ಸ್ಫೋಟಗಳು ಸಂಭವಿಸಿದ್ದವು. ಆಮೇಲೆ ಕ್ರೀಡಾಂಗಣದ ಸುತ್ತಾ ಅನೇಕ ಸಜೀವ ಬಾಂಬ್ ಗಳು ಸಹ ಪತ್ತೆಯಾಗಿತ್ತು.
ಅಬ್ದುಲ್ ನಾಸಿರ್ ಮದನಿ ವಿಎಸ್ ಆಚಾರ್ಯ ಬಾಂಬ್ ಸ್ಫೋಟ ಶಂಕರ್ ಬಿದರಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ shankar bidari vs acharya bomb blast bengaluru chinnaswamy stadium
Story first published: Thursday, August 26, 2010, 10:11 [IST]