ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಿತ್ತಲ್ ಕಂಪೆನಿ ವಿರುದ್ಧ ಆಹೋರಾತ್ರಿ ಪ್ರತಿಭಟನೆ
ಈ ಕೈಗಾರಿಕೆಗಳ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಂಚಾಲಕ ಎಂ. ಬಸವರಾಜ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಡತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ, ಸಿದ್ಧಮ್ಮನಹಳ್ಳಿ ಗ್ರಾಮಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 30 ರ ಸೋಮವಾರ ಬೆಳಗ್ಗೆ 10ಗಂಟೆಗೆ ಪ್ರತಿಭಟನೆ ಪ್ರಾರಂಭ. ಆಗಸ್ಟ್ 31ರ ಮಂಗಳವಾರ ಬೆಳಗ್ಗೆ 10ಗಂಟೆಗೆ ಪ್ರತಿಭಟನೆ ಮುಕ್ತಾಯ ಆಗಲಿದೆ ಎಂದು ಅವರು ಹೇಳಿದರು.
ಕುಡತಿನಿ ಗ್ರಾಮವು ಈಗಾಗಲೇ ವಾಡಾ ವ್ಯಾಪ್ತಿಗೆ ಸೇರಿದೆ. ಈ ಗ್ರಾಮದ ಆಸುಪಾಸಿನಲ್ಲಿ ಪ್ರತಿ 30X40 ನಿವೇಶನಕ್ಕೆ 8 ರಿಂದ 15 ಲಕ್ಷ ರು. ಬೆಲೆ ಇದೆ. ಈ ಕಾರಣಕ್ಕಾಗಿ ರೈತರು ಭೂಮಿಯಲ್ಲಿ ಭಾರೀ ಯೋಜನೆಗಳಿಗೆ ನೀಡುತ್ತಿದ್ದು ಸರ್ಕಾರ - ಜಿಲ್ಲಾಡಳಿತ ಪ್ರತೀ ಎಕರೆಗೆ ಕನಿಷ್ಠ 77ಲಕ್ಷ ರು.ಗಳನ್ನು ಪರಿಹಾರವಾಗಿ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
Comments
ಬಳ್ಳಾರಿ ರೈತ ಕುಡತಿನಿ ಪ್ರತಿಭಟನೆ ಉಕ್ಕು ಕಾರ್ಖಾನೆ ರೋಹಿಣಿ lakshmi mittal kudatini farmer protest steel industry rohini ಲಕ್ಷ್ಮಿ ಮಿತ್ತಲ್
Story first published: Wednesday, August 25, 2010, 18:39 [IST]