ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಲೂರಿನ ಲವ್ ಜಿಹಾದ್ ಗೆ ಒಳ್ಳೆ ಕ್ಲೈಮ್ಯಾಕ್ಸ್
ಮಾಲೂರಿನ ಮುಸ್ಲಿಂ ಕೋಮಿಗೆ ಸೇರಿದ ಬಷೀರ್ ಎಂಬಾತ ಟೆಂಪೋಚಾಲಕನಾಗಿ ವೃತ್ತಿಯಲ್ಲಿದ್ದಾನೆ. ತೋಟಗಳಿಗೆ ಸೊಪ್ಪುಗಳನ್ನು ತಂದು ಹಾಕಿ ಬಾಡಿಗೆ ಪಡೆಯುವುದು ಈತನ ಕೆಲಸ. ಈಗಾಗಲೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವ ಬಷೀರ್ ಗೆ ಹಿಂದೂ ಹುಡುಗಿ ಭಾರತಿಯ ಮೇಲೆ ಪ್ರೀತಿ ಹುಟ್ಟುಕೊಂಡಿದೆ.
ಈ ವಿಷಯ ಭಾರತಿ ಮನೆ ಕಡೆಯವರಿಗೆ ಊರಿನ ಹಿರಿಯರಿಗೆ ತಿಳಿದು, ಬಷೀರ್ ಗೆ ಬುದ್ಧಿ ಹೇಳಿದ್ದರು. ಕೆಲಕಾಲ ಸುಮ್ಮನಿದ್ದ ಬಷೀರ್ ಮತ್ತೆ ಚಾಳಿ ಮುಂದುವರೆಸಿದಾಗ, ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿದೆ. ಈ ಕೇಸಿಗೆ ಮದುವೆಯೇ ಸೂಕ್ತ ಪರಿಹಾರ ಎಂದು ನಿರ್ಧರಿಸಿದ ಪಂಚಾಯಿತಿಯವರು, ಭಾರತಿಯನ್ನು ಮದುವೆಗೆ ಒಪ್ಪಿಸಿ ಉಪನೊಂದಾಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಸಿ, ಬಷೀರ್ ಗೆ ಭಾರತಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಹೇಳಿ ಕಳಿಸಿದ್ದಾರೆ.
Comments
Story first published: Monday, August 23, 2010, 13:08 [IST]