ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೊಳುವಾರುಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಹಮ್ಮದ್ ಕುಂಞ ಅವರು ಮಕ್ಕಳ ಸಾಹಿತ್ಯಕ್ಕೆ ನೀಡುರುವ ಕೊಡುಗೆ ಅಮೂಲ್ಯವಾದುದು. ದಕ್ಷಿಣ ಕನ್ನಡದ ಪುತ್ತೂರಿನವರಾಗಿದ್ದು ಸದ್ಯಕ್ಕೆ ಬೆಂಗಳೂರಿನಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮಹಾಪ್ರಬಂಧಕರಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಞ ಅವರ 'ತಟ್ಟು ಚಪ್ಪಾಳೆ ಪುಟ್ಟ ಮಗು' ಮಕ್ಕಳ ಸಾಹಿತ್ಯದ ಶಿಖರಪ್ರಾಯ ಕೃತಿಯಾಗಿದೆ.
ಮುಸ್ಲಿಂ ಲೇಖಕರ ಪಡೆಯಲ್ಲಿ ವಿಶಿಷ್ಟ ಸಂವೇದನೆಯ ಸಾಹಿತಿಯಾಗಿ ಹೊರಹೊಮ್ಮಿದವರು ಕುಂಞ. ಒಂದು ತುಂಡು ಗೋಡೆ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲಿ, ಅಂಕ ಅವರ ಗಮನಾರ್ಹ ಕಥಾ ಸಂಕಲನಗಳು. 'ಜಿಹಾದ್' ಅವರ ಪ್ರಮುಖ ಕಾದಂಬರಿ. ಪಿ ಶೇಷಾದ್ರಿ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ 'ಮುನ್ನುಡಿ' ಬೊಳುವಾರು ಅವರ ಕತೆಯನ್ನು ಆಧರಿಸಿದೆ.
"ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ. ಇದರಿಂದ ಮತ್ತೊಂದಷ್ಟು ಜನಕ್ಕೆ ನನ್ನ ಕೃತಿ ತಲುಪಲಿದೆ" ಎಂದು ಬೊಳುವಾರು ಪ್ರತಿಕ್ರಿಯಿಸಿದ್ದಾರೆ. ಈ ಕೃತಿಯಲ್ಲಿ ಮಕ್ಕಳಿಗಾಗಿ ಗಾಂಧಿಯನ್ನು ವಿಶೇಷವಾಗಿ ಪರಿಚಯಿಸಿದ್ದೇನೆ ಎಂದಿದ್ದಾರೆ.
Comments
Story first published: Sunday, August 22, 2010, 12:00 [IST]