ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾಕರ್ ಎತ್ತಂಗಡಿ, ತನಿಖೆಗೆ ಸಿಎಂ ಆದೇಶ

By Mahesh
|
Google Oneindia Kannada News

D Sudhakar
ಬೆಂಗಳೂರು, ಆ.21: ಬೆಗ್ಗರ್ಸ್ ಕಾಲೋನಿ ದುರಂತದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಿ ಸುಧಾಕರ್ ಅವರ ಖಾತೆಯನ್ನು ಕಿತ್ತುಕೊಂಡು ಮುಜರಾಯಿ ಇಲಾಖೆ ನೀಡಲಾಗಿದೆ. ಗೋವಿಂದ ಕಾರಜೋಳ ಅವರಿಗೆ ಹೆಚ್ಚುವರಿಯಾಗಿ ಸಮಾಜ ಸುಧಾರಣೆ ಹೊಣೆ ಹೊರೆಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಸುಧಾಕರ್, ಸಾವಿಗೆ ನನ್ನನ್ನು ಬಲಿಪಶು ಮಾಡಲಾಗಿದೆ, ಹಾಗಾಗಿ ಬೇಸರವಿದೆ. ಯಡಿಯೂರಪ್ಪ ನಮ್ಮ ನಾಯಕರು ಅವರ ಎಲ್ಲ ತೀರ್ಮಾನಗಳಿಗೂ ಬದ್ಧನಿದ್ದೇನೆ. ರಾಜೀನಾಮೆ ಕೊಡುತ್ತೇನೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ.

ನಿಲ್ಲದ ನಿರ್ಗತಿಕರ ಮರಣ: ಸಾವಿನ ಮನೆ ಸಂಖ್ಯೆ 23ಕ್ಕೆ ಏರಿದ್ದು, ನಿಲ್ಲುವ ಸೂಚನೆ ಕಂಡುಬಂದಿಲ್ಲ. ಭಿಕ್ಷುಕರ ಕಾಲೋನಿಗೆ ಭೇಟಿ ನೀಡಿದ ಸಿಎಂಗೆ ಮನವಿ ಮಾಡಿಕೊಂಡಿರುವ ಅಳಿದುಳಿದಿರುವ ಭಿಕ್ಷುಕರು ತಮ್ಮನ್ನು ಇಲ್ಲಿಂದ ಬೇಗ ಹೊರಕ್ಕೆ ಕಳಿಸಿ ಸಾವನ್ನು ಎದುರು ನೋಡುತ್ತಾ ಜೀವಿಸಲಾಗದು ಎಂದು ಗೋಳಾಡಿದ್ದಾರೆ.

ವಾಂತಿ ಭೇದಿ, ಕರಳು ಬೇನೆ ಮುಂತಾದ ಕಾಯಿಲೆಯಿಂದ ಬಳಲುತ್ತಿರುವ 30 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇವರಲ್ಲಿ 10 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X