ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಟಿಟಿಡಿ ಆಡಳಿತ ಮಂಡಳಿ ವಿಸರ್ಜನೆ ಸನ್ನಿಹಿತ
ಗುರುವಾರ (ಆ.19) ಮುಖ್ಯಮಂತ್ರಿ ರೋಸಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಳಿಯ ಸ್ಥಾನದಲ್ಲಿ ನಿರ್ಧಿಷ್ಟ ಪ್ರಾಧಿಕಾರವನ್ನು ಸ್ಥಾಪಿಸುವ ಸಂಬಂಧ ಕಾರ್ಯಸೂಚಿ ಸಿದ್ಧಗೊಳಿಸಲಾಗಿದ್ದು ಶೀಘ್ರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಆಂಧ್ರ ವಾರ್ತಾ ಸಚಿವೆ ಗೀತಾ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಟಿಟಿಡಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು ದೇವಾಲಯದ ಸೇವಾ ಟಿಕೆಟ್ ಗಳ ಕಾಳಸಂತೆ ಮಾರಾಟದಲ್ಲಿ ಶಾಮೀಲಾಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ರಾಜ್ಯ ಸರಕಾರ ವಿಚಕ್ಷಣ ಇಲಾಖೆಯ ವರದಿಯನ್ನು ಬಹಿರಂಗಗೊಳಿಸಬೇಕು. ಆಡಳಿತ ಮಂಡಳಿಯನ್ನು ವಿಸರ್ಜಿಸಿ ಧಾರ್ಮಿಕ ಆಚರಣೆಗಳ ಸ್ಪಷ್ಟ ಜ್ಞಾನವಿರುವ ರಾಜಕೀಯೇತರ ವ್ಯಕ್ತಿಗಳನ್ನು ಮಂಡಳಿಗೆ ನೇಮಿಸಬೇಕೆಂದು ಹಿರಿಯ ಬಿಜಿಪಿ ನಾಯಕ ಬಂಡಾರು ದತ್ತಾತ್ರೇಯ ಸರಕಾರವನ್ನು ಒತ್ತಾಯಿಸಿದ್ದಾರೆ.
Comments
Story first published: Friday, August 20, 2010, 10:46 [IST]