ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಸ್ಫೋಟ : ಕೈಗೆ ಸಿಗದ ಮದನಿ
ಬೆಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದ್ದು, ಆತನ ಬಂಧನ ನಿಶ್ಚಿತ ಎಂಬ ಉಹಾಪೋಹಗಳಿಗೆ ಕಾರಣವಾಯಿತು. ಆದರೆ, ಆತನ ಬಂಧನದ ಕುರಿತ ನಿಗೂಢತೆ ಮುಂದುವರಿದಿದೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಾಗುತ್ತದೆ ಎನ್ನುವ ಬಗ್ಗೆ ರಾಜ್ಯದ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.
ಮದನಿ ವಿಷಯದಲ್ಲಿ ಕೇರಳ ಸರಕಾರ ವರ್ತಸುತ್ತಿರುವ ಬಗ್ಗೆ ಗೃಹ ಸಚಿವ ವಿ ಎಸ್ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೇರಳ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ನಾವು ಪರ್ಯಾಯ ಯೋಚನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
Comments
ಬೆಂಗಳೂರು ಸ್ಫೋಟ ಅಬ್ದುಲ್ ನಾಸಿರ್ ಮದನಿ ವಿ ಎಸ್ ಆಚಾರ್ಯ ಭಯೋತ್ಪಾದನೆ ಕೇರಳ ಅಲ್ಪಸಂಖ್ಯಾತರು ಸುಪ್ರಿಂಕೋರ್ಟ್ bangalore blast abdul nasser madani vs acharya terrorism kerala minorities supreme court
Story first published: Tuesday, August 17, 2010, 10:09 [IST]