ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಗ್ಯಲಕ್ಷ್ಮಿ ಜೊತೆ ಸೀರೆ ಉಚಿತ
ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವ ಎಂ ಪಿ ನರೇಂದ್ರಸ್ವಾಮಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ತಲಾ 300 ರುಪಾಯಿ ಬೆಲೆಯ ಸೀರೆಯನ್ನು 9 ಲಕ್ಷ ತಾಯಂದಿರಿಗೆ ವಿತರಿಸಲಾಗುವುದು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಇವುಗಳನ್ನು ಪೂರೈಸಲಾಗುವುದು. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ 30 ಕೋಟಿ ರುಪಾಯಿ ಒದಗಿಸಿದ್ದಾರೆ ಎಂದು ನರೇಂದ್ರಸ್ವಾಮಿ ಹೇಳಿದರು.
ಈ ತಿಂಗಳ 16ರ ನಂತರ ಎಲ್ಲಾ ಜಿಲ್ಲೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳ ಸಮಾವೇಶ ಆಯೋಜಿಸಿ, ತಾಯಂದಿರು ಮತ್ತು ಫಲಾನುಭವಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಅವರು ವಿವರಿಸಿದರು.
Comments
Story first published: Friday, August 13, 2010, 15:42 [IST]