ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗೂ ಪಡಿತರ ಸ್ವತಂತ್ರ ದಿನದ ಕೊಡುಗೆ

By Mahesh
|
Google Oneindia Kannada News

R Ashoka
ಬೆಂಗಳೂರು, ಆ.12: ಬೆಲೆ ಏರಿಕೆಯ ಬಿಸಿಯಿಂದ ಬಸವಳಿದಿರುವ ನಾಡಿನ ಜನತೆಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಎಲ್ಲರಿಗೂ ಪಡಿತರ ವ್ಯವಸ್ಥೆಯಲ್ಲಿ ಆಹಾರ ಧ್ಯಾನ ಪೂರೈಸಲು ಯಡಿಯೂರಪ್ಪ ಅವರ ಸರ್ಕಾರ ಮುಂದಾಗಿದೆ.

ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರ ಜೊತೆಗೆ ಯಾವುದೇ ಕಾರ್ಡ್ ಇರದ ಜನ ಸಾಮಾನ್ಯರಿಗೂ ಆಹಾರ ಧ್ಯಾನ ಲಭ್ಯವಾಗಲಿದೆ ಎಂದು ಸಾರಿಗೆ ಸಚಿವ ಅರ್ ಅಶೋಕ್ ಸುದ್ದಿಗಾರರಿಗೆ ತಿಳಿಸಿದರು.

ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು 6 ತಿಂಗಳಿಗೊಮ್ಮೆ 50 ಕೆಜಿ ಅಕ್ಕಿ ಹಾಗೂ ಗೋಧಿಯನ್ನು ನೇರವಾಗಿ ಆಹಾರ ನಿಗಮದ ಉಗ್ರಾಣಗಳಿಂದ ಪಡೆಯಬಹುದಾಗಿದೆ. 13 ರು ಗೆ ಒಂದು ಕೆಜಿ ಅಕ್ಕಿಯಂತೆ 50 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿಗೆ 9.50 ರೂ ನಂತೆ 50 ಕೆಜಿ ಗೋಧಿಯನ್ನು ಪಡೆಯಬಹುದು .ಎಪಿಲ್ ಕಾರ್ಡ್ ದಾರರು ಪ್ರತಿ ಕೆಜಿ ಅಕ್ಕಿಗೆ 9.40 ರು (10 ಕೆಜಿ ಗರಿಷ್ಠ), ಪ್ರತಿ ಕೆಜಿ ಗೋಧಿಗೆ 7.20ರು (4 ಕೆಜಿ ಗರಿಷ್ಠ) ಎಂದು ಅಶೋಕ್ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳು, ಕಲಾವಿದರು, ಅಂಗವಿಕಲರು, ಖಾಸಗಿ ಸಂಸ್ಥೆಗಳ ನೌಕರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು, ಸಾರ್ವಜನಿಕ ಉದ್ದಿಮೆಗಳ ಸಿಬ್ಬಂದಿಗಳು ಯಾವುದೇ ಗುರುತಿನ ಚೀಟಿ ತೋರಿಸಿ ಆಹಾರ ಧಾನ್ಯ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X