ಬಿಷಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಿಎಂ
ಬೆಂಗಳೂರು, ಆ .1 : ರಾಜ್ಯದಲ್ಲಿ ನಡೆದಿದ್ದ ಚರ್ಚ್ ದಾಳಿ ಸಂದರ್ಭದಲ್ಲಿ ಆರ್ಚ್ ಬಿಷಪ್ ಡಾ. ಬರ್ನಾಡ್ ಮೋರಸ್ ಅವರನ್ನು ಭೇಟಿ ಮಾಡಿ ಅವರಿಂದ ಮುಖಭಂಗ ಅನುಭವಿಸಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಂಗಳವಾರ (ಆ.10) ರಾತ್ರಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛವಿತ್ತು 69ನೇ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನವದೆಹಲಿಯಿಂದ ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿಗಳು ನೇರವಾಗಿ ಮೋರಸ್ ಅವರ ನಿವಾಸಕ್ಕೆ ತೆರಳಿ ಬಿಷಪ್ ಅವರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಮೋರಸ್ ಅವರು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ, ವಿಶೇಷವಾಗಿ ಬಡಜನರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ರಾಜ್ಯದ ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲಾ ಸಮುದಾಯಗಳ ಜನರಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸಲು ಬದ್ಧವಾಗಿದೆ. ಅಲ್ಪ ಸಂಖ್ಯಾತರು ಯಾವುದೇ ಕಾರಣಕ್ಕೆ ಅಭದ್ರತೆಗೆ ಒಳಗಾಗದಂತೆ ನೆಮ್ಮದಿಯ ಜೀವನ ನಡೆಸಲು ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಸರಕಾರ
ರೂಪಿಸಿರುವ
ಅಭಿವೃದ್ಧಿ
ಮತ್ತು
ಕಲ್ಯಾಣ
ಕಾರ್ಯಕ್ರಮಗಳ
ಪ್ರಯೋಜನ
ಪಡೆದು
ಅಲ್ಪ
ಸಂಖ್ಯಾತರು
ಯಾವುದೇ
ಹಿಂಜರಿಕೆಯಿಲ್ಲದೆ
ಅಭಿವೃದ್ದಿಯ
ಮುಖ್ಯವಾಹಿನಿಗೆ
ಸೇರಿಕೊಳ್ಳುವಂತೆ
ಬಿಷಪ್
ಅವರಿಗೆ
ಯಡಿಯೂರಪ್ಪ
ಆಹ್ವಾನ
ನೀಡಿದರು.
ಗ್ಯಾಲರಿ:ಆರ್ಚ್
ಬಿಷಪ್
ಗೆ
ಶುಭಕೋರಿದ
ಯಡಿಯೂರಪ್ಪ