ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಲಪಾತಕ್ಕೆ ಬಿದ್ದು ವಿಪ್ರೋ ಟೆಕ್ಕಿ ಸಾವು
ಬೆಂಗಳೂರು ವಿಪ್ರೋ ಕಂಪನಿ ಉದ್ಯೋಗಿ ಮಂಜುನಾಥ್(30) ಎಂಬುವನೇ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ದೈವಿ. ಗಗನಚುಕ್ಕಿಯ ದೊಡ್ಡ ಬಂಡೆಯೇರಿ ಜಲಪಾತವನ್ನು ಅತಿ ಸಮೀಪದಿಂದ ವೀಕ್ಷಿಸಲು ಮಂಜುನಾಥ್ ಮುಂದಾದಾಗ ಕಾಲುಜಾರಿ ಜಲಪಾತಕ್ಕೆ ಬಿದ್ದನೆನ್ನಲಾಗಿದೆ.
ತಮ್ಮ ಮಗನಿಗೆ ಆತ್ಮಹತ್ಯೆಯ ಯಾವ ಉದ್ದೇಶವಿರಲಿಲ್ಲ. ಆಕಸ್ಮಿಕ ಸಾವಿನಿಂದ ಆಘಾತವಾಗಿದೆ ಎಂದು ಮೃತರ ತಂದೆ ಪ್ರತಿಕ್ರಿಯಿಸಿದ್ದಾರೆ. ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದು, ಶವಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಿದ್ದಾರೆ. ವಾರಾಂತ್ಯದಲ್ಲಿ ಜಲಪಾತ ನೋಡಲು ಬರುವ ಟೆಕ್ಕಿ ಸಮೂಹಕ್ಕೆ ಎಚ್ಚರಿಕೆಯಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ.
Comments
ವಿಪ್ರೋ ಟೆಕ್ಕಿ ಸಾವು ಜಲಪಾತ ಕ್ರೈಂ ಕೊಳ್ಳೇಗಾಲ ಶಿವನಸಮುದ್ರ ಗಗನಚುಕ್ಕಿ ಬೆಂಗಳೂರು kollegal shivanasamudra wipro techie waterfall demise bengaluru
Story first published: Wednesday, August 11, 2010, 17:19 [IST]