ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸನ್ನಡತೆಯ ಜೈಲು ಹಕ್ಕಿಗಳ ಪರ ನಿಂತ ಮುತಾಲಿಕ್
ನಗರದ ಜಿಲ್ಲಾ ಉಪ ಕಾರಾಗೃಹದ ಮುಂದೆ ಇಂದು ನೂರಾರು ಬೆಂಬಲಿಗರೊಂದಿಗೆ ಜಮಾಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯದ ವಿವಿಧ ಕಾರಾಗೃಹದಲ್ಲಿ ಸನ್ನಡತೆವುಳ್ಳ 580ಕ್ಕೂ ಹೆಚ್ಚು ಖೈದಿಗಳಿದ್ದಾರೆ. ಇವರನ್ನು ಬಿಜೆಪಿ ಸರ್ಕಾರ ಸ್ವಾತಂತ್ರೋತ್ಸವ ದಿನದಂದು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದಲ್ಲಿ 7 ವರ್ಷದ ಕಾರಾಗೃಹವಾಸ ಅನುಭವಿಸಿದ 948 ಖೈದಿಗಳಿದ್ದಾರೆ. ಕೇರಳ, ಆಂಧ್ರ, ತಮಿಳುನಾಡಿನಲ್ಲಿ 7 ವರ್ಷಕ್ಕೂ ಮೇಲ್ಪಟ್ಟ ಅವಧಿಯ ಶಿಕ್ಷೆ ಅನುಭವಿಸಿದವರಿಗೆ ಬಿಡುಗಡೆ ಭಾಗ್ಯ ಪ್ರಾಪ್ತಿಯಾಗಿದೆ.
ಕರ್ನಾಟಕದಲ್ಲಿ ಈ ಹಿಂದಿನ ಸರ್ಕಾರಗಳು ಉತ್ತಮ ನಡತೆ ಹೊಂದಿದ ಖೈದಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿದ ಉದಾಹರಣೆಗಳಿವೆ. ಆದ್ದರಿಂದ, ಬಿಜೆಪಿ ಸರ್ಕಾರ ಕೂಡಾ, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜೈಲ್ ಸೂಪರ್ ಇಂಟೆಂಡೆಂಟ್ ಗೆ ಮನವಿ ಸಲ್ಲಿಸಿದರು.
Comments
ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿ ಸ್ವಾತಂತ್ರೋತ್ಸವ ಖೈದಿ ಬಿಡುಗಡೆ ಜಿಲ್ಲಾಸುದ್ದಿ ಕೈಂ ಬಿಜೆಪಿ independence day prisoners sriram sene pramod muthalik district news bjp crime beat
Story first published: Tuesday, August 10, 2010, 17:52 [IST]