ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ರಮ ಗಣಿಗಾರಿಕೆ : ಸರಕಾರಕ್ಕೆ ಲೋಕಾಯುಕ್ತರ ಪತ್ರ
ಕರ್ನಾಟಕದಿಂದ ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಕೃಷ್ಣಪಟ್ಟಣ ಸೇರಿದಂತೆ ವಿವಿಧ ಬಂದರುಗಳಿಂದ ರಫ್ತಾಗಿರುವ ಅದಿರಿನ ಬಗ್ಗೆ ಮಾಹಿತಿ ಪಡೆಯಲು ಕೋರಿ ಲೋಕಾಯುಕ್ತ ಸಂತೋಷ ಹೆಗ್ಡೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದಿಂದ ಕೋಟ್ಯಂತರ ರುಪಾಯಿ ಮೌಲ್ಯದ ಅದಿರು ನೆರೆ ರಾಜ್ಯದ ಬಂದರುಗಳಿಂದ ರಫ್ತಾಗುತ್ತದೆ. ಈ ಬಗ್ಗೆ ಆಂಧ್ರದಿಂದ ಮಾಹಿತಿ ಪಡೆಯುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
ಆದರೆ, ಈವರೆಗೊ ಉತ್ತರ ಬಂದಿಲ್ಲ. ಸರಕಾರದಿಂದ ಉತ್ತರ ಬರಲಿ, ಬರದೇ ಇರಲಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಅಕ್ರಮ ಗಣಿಗಾರಿಕೆಯ ಎರಡನೇ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ. ಅಕ್ರಮ ಗಣಿಗಾರಿಕೆಯನ್ನು ಸರಕಾರ ಲೋಕಾಯುಕ್ತ ಇಲಾಖೆಗೆ ಒಪ್ಪಿಸಿದ್ದರಿಂದ ಸುಮ್ಮನಿದ್ದೇನೆ. ಈ ಅಕ್ರಮದಲ್ಲಿ ಗಣಿ ಮಾಲೀಕರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಎರಡನೇ ವರದಿ ಬೆಳಕು ಚೆಲ್ಲಲಿದೆ ಎಂದು ಹೆಗ್ಡೆ ಹೇಳಿದರು.
Comments
ಅಕ್ರಮ ಗಣಿಗಾರಿಕೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅದಿರು ಬೇಲೇಕೇರಿ ಬಂದರು ಬಳ್ಳಾರಿ ಬಂದರು ಆಂಧ್ರ ಪ್ರದೇಶ ವಿಶಾಖಪಟ್ಟಣ illegal mining lokayukta santosh hegde iron ore belekeri port andhra pradesh
Story first published: Thursday, August 5, 2010, 13:10 [IST]