ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಬೆಳಗಾವಿ ಗಡಿ ಗದ್ದಲ
ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕುರಿತು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ಶಿವ ಸೇನೆ ಸದಸ್ಯರು ಪ್ರಸ್ತಾಪಿಸಿದಾಗ, ಕರ್ನಾಟಕದ ಸಂಸದರು ಆಕ್ಷೇಪಿಸಿದರು. ಮಹಾರಾಷ್ಟ್ರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ವಿಷಯದ ಚರ್ಚೆಗೆ ಆಸ್ಪದ ನೀಡಬಾರದು ಎಂದು ರಾಜ್ಯದ ಸಂಸದರು ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಶಿವಸೇನೆಯ ಆನಂದರಾವ್ ಅತ್ಸಲ್ ಸೇರಿದಂತೆ ಕೆಲವರು 'ಬೆಳಗಾಂ ಹಮಾರಾ ಹೈ' ಎಂದು ಘೋಷಣೆ ಕೂಗಿದರು. ಇದಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ಸಿಗರು ಕೈ ಜೋಡಿಸಿದರು. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಎಲ್ಲಾ ಪಕ್ಷಗಳ ಸಂಸದರು ಚರ್ಚೆಗೆ ಅವಕಾಶ ನೀಡಬಾರದು ಎಂದು ಪ್ರತಿಯಾಗಿ ಕೂಗಿದರು.
ಚರ್ಚೆಗೆ ಅವಕಾಶ ನೀಡಬಾರದು ಎಂದು ಸ್ಪೀಕರ್ ಮೀರಾಕುಮಾರ್ ಅವರಿಗೆ ಮನವಿ ಮಾಡಿದ ಕೇಂದ್ರ ರೈಲ್ವೇ ಸಹಾಯಕ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಬಿಜೆಪಿ ಸಂಸಾದ್ ಅನಂತ ಕುಮಾರ್ ಅವರು ಗಡಿ ವಿವಾದ ವಿಷಯದಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದರು.
Comments
ಲೋಕಸಭೆ ಮೀರಾಕುಮಾರ್ ಶಿವಸೇನಾ ಕಾಂಗ್ರೆಸ್ ಬಿಜೆಪಿ ಅನಂತ್ ಕುಮಾರ್ ಮಹಾರಾಷ್ಟ್ರ ಗಡಿ ವಿವಾದ ಸಂಸತ್ತು lok sabha meira kumar shiva sena congress bjp maharashtra ಬೆಳಗಾವಿ
Story first published: Tuesday, August 3, 2010, 18:17 [IST]