ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಅವಘಡ ತಪ್ಪಿಸಲು ಬಿಬಿಎಂಪಿ ಸನ್ನದ್ಧ

By Mahesh
|
Google Oneindia Kannada News

Rain havoc, BBMP is ready to tackle
ಬೆಂಗಳೂರು, ಜು.31: ಬಿಬಿಎಂಪಿ ಕಚೇರಿಯಲ್ಲಿ ನೂರು ದಿನಗಳನ್ನು ಪೂರೈಸಿದ ಹೊಸ ಹುರುಪಿನಲ್ಲಿರುವ ಮೇಯರ್ ಎಸ್ ಕೆ ನಟರಾಜ್ ಅವರಿಗೆ ಸದ್ಯಕ್ಕೆ ಬಿಬಿಎಂಪಿ ಬಜೆಟ್ ಮಂಡನೆಯದ್ದೇ ಚಿಂತೆ. ಸರ್ಕಾರ 500 ಕೋಟಿ ನೀಡಿ ಮಿಕ್ಕ ಸಾವಿರ ಕೋಟಿ ನೀವೆ ಉತ್ಪಾದಿಸಿಕೊಳ್ಳಿ ಎಂದಿದೆ. ಈ ಎಲ್ಲದರ ಮಧ್ಯೆ ಮಳೆಕಾಟದ ತೊಂದರೆ ಬೇರೆ ಎದುರಾಗಿದೆ.

ಆದರೆ, ಮುಂಗಾರು ಮಳೆ ಅವಾಂತರವನ್ನು ಎದುರಿಸಲು ಬಿಬಿಎಂಪಿ ಸನ್ನದ್ಧವಾಗಿ ಆಯುಕ್ತ ಸಿದ್ಧಯ್ಯ ಅವರ ನೇತೃತ್ವದ ತಂಡ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಲಯವಾರು ಅಧಿಕಾರಿಗಳು ಹಾಗೂ ಪ್ರಹಾರಿ ತಂಡ ಕೂಡಾ ಒಳಚರಂಡಿ ವ್ಯವಸ್ಥೆಯ ಬಗ್ಗೆ ನಿಗಾವಹಿಸಿವೆ.

ರೈನ್ ಕೋಟ್ ಸೇರಿದಂತೆ ಸುರಕ್ಷಿತ ಸಾಮಾಗ್ರಿಗಳನ್ನು ಅಗತ್ಯಬೀಳುವ ಕೇಂದ್ರಗಳಲ್ಲಿ ಇರಿಸಲಾಗುವುದು. ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ಮಳೆಯ ಆರ್ಭಟಕ್ಕೆ ಬೀಳುವ ಮರಗಳನ್ನು ಕೂಡಲೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಮಳೆ ಅವಘಡಗಳ ಬಗ್ಗೆ ಮಾಹಿತಿ ಹಾಗೂ ಸಹಾಯಕ್ಕಾಗಿ ತುರ್ತು ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಗತ್ಯಬಿದ್ದಾಗಿ ಸಂಪರ್ಕಿಸಬಹುದು ಎಂದು ಮೇಯರ್ ಹೇಳಿದರು.

ಕೇಂದ್ರಕಂಟ್ರೋಲ್ ರೂಂ:(080) 22221188
ದಕ್ಷಿಣ ವಲಯ: 26566362
ಪೂರ್ವ ವಲಯ: 22975803
ಪಶ್ಚಿಮ ವಲಯ : 23561692
ದಾಸರಹಳ್ಳಿ: 28393688/22975904
ಬೊಮ್ಮನಹಳ್ಳಿ: 25732447/25735642
ಮಹದೇವಪುರ: 28512300/01
ರಾಜರಾಜೇಶ್ವರಿ ನಗರ: 28601851/28600954

ರಾಜ್ಯದ ಎಲ್ಲೆಡೆ ಪ್ರವಾಹ ಭೀತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿವ ಭಾರಿ ಮಳೆಯ ಕಾರಣದಿಂದ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮೂರು ದಿನಗಳ ರಜೆ ನೀಡಲಾಗಿದೆ. ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೇ ಹೆಚ್ಚಾಗುತ್ತಿದ್ದು, ಅಪಾಯದ ಸೂಚನೆ ನೀಡುತ್ತಿವೆ. ಕರಾವಳಿ, ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಕರ್ನಾಟಕ ಪ್ರದೇಶದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X