ಯಡ್ಡಿ ಸ್ವಲ್ಪ ಪುರುಷತ್ವ ಬೆಳೆಸಿಕೊಳ್ಳಿ:ಇಬ್ರಾಹಿಂ
ಪಾದಯಾತ್ರೆಯ ಎರಡನೇ ದಿನವಾದ ಸೋಮವಾರ (ಜು.26) ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಇಬ್ರಾಹಿಂ, ರಾಜ್ಯದಲ್ಲಿ ನಡೆಯುತ್ತಿರುವ ರಾದ್ದಾಂತಗಳಿಗೆ ಯಡಿಯೂರಪ್ಪ ಕಾರಣವಲ್ಲ. ಜೆಡಿಎಸ್ ನವರು ಬಸ್ ಸ್ಟ್ಯಾಂಡ್ ನಲ್ಲಿ ಬಿಜೆಪಿಯನ್ನು ಪ್ರೀತಿ ಮಾಡಿದರು. ರೆಸಾರ್ಟ್ ನಲ್ಲಿ ಬಸುರು ಮಾಡಿದರು. ಆಗ ಹುಟ್ಟಿದ್ದೇ ಸಮ್ಮಿಶ್ರ ಸರಕಾರ. ಜೆಡಿಎಸ್ - ಬಿಜೆಪಿ 20 -20 ತಿಂಗಳು ಅಂತಾ ಅಧಿಕಾರಾನ ಹಂಚಿಕೊಂಡರು.
ಆಮೇಕೆ ಕಿತ್ತಾಡ್ಕೊಂದ್ರು ಅನುಕಂಪದಿಂದ ನಮ್ಮ ಎಡ್ಡಿ ಸಾಹೇಬರು ಅಧಿಕಾರಕ್ಕೆ ಬಂದ್ರು. ಅಧಿಕಾರಕ್ಕೆ ಬಂದು ಆಪರೇಷನ್ ಕಮಲ ಅಂತ ಶುರು ಮಾಡಿದ್ರು. ನಮ್ಮ ಮಕ್ಳು ನಮ್ಮ ಮಕ್ಳು ಅಂತ ಸೋಮಣ್ಣ, ಜಗ್ಗೇಶ್, ಯೋಗೀಶ್ ಅವರನ್ನು ಪಕ್ಷಕ್ಕೆ ಎಳ್ಕೊಂಡ್ರು. ಯಾಕ್ರೀ ಯಡಿಯೂರಪ್ಪ, ನಿಮಗೆ ಮಕ್ಳು ಹುಟ್ಸೋ ತಾಕತಿಲ್ವಾ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಸರಕಾರದಲ್ಲಿರುವ ಸಚಿವರುಗಳು ಬರೀ ಅನ್ನಾ- ಸಾಂಬಾರ್ ಬಿಟ್ಟು ಬೇರೇನೂ ತಿನ್ನಕಿಲ್ಲ ಅಂತಾವ್ರೆ. ಆದ್ರೆ ಇವರುಗಳು ದುಡ್ಡು ತಿಂತಾವ್ರೆ. ಅನ್ನಾ- ಸಾಂಬಾರ್ ತಿನ್ಕೊಂಡೆ ಈ ಪಾಟಿ ವೋಡಿತಾವ್ರೆ ಇನ್ನೇನಾದ್ರು ಬಾಡೂಟ ತಿಂದಿದ್ರೆ ಏನಪ್ಪಾ ಗತಿ. ಸರಕಾರದಲ್ಲಿರುವ ಮಂತ್ರಿಗಳನ್ನು ನೋಡಿದ್ರೆ ಪೋಲೀಸ್ ಸ್ಟೇಷನ್ ನಲ್ಲಿ ಕಳ್ರ ಫೋಟೋ ನೋಡಿದ ಹಾಗೆ ಆಗುತ್ತೆ.
ತಾಯಿ ಸುಷ್ಮಾ ಸ್ವರಾಜ್ ಎಂಥಾ ಮಕ್ಳಿಗೆ ಜನ್ಮ ನೀಡಿದ್ದೀಯಾ ತಾಯಿ. ನಿಮ್ಮ ಮಕ್ಳ ಬಳಿ 36 ಸಾವಿರ ಕೋಟಿ ಆಸ್ತಿ ಐತಂತೆ. ನಮ್ಮನ್ನೂ ದತ್ತು ತೆಗೆದುಕೊಂಡು ಬಿಡಮ್ಮ ಎಂದು ಹಳ್ಳಿ ಭಾಷೆಯಲ್ಲಿ ವ್ಯಂಗ್ಯ ವಾಡಿದ್ದಾರೆ.