ಜನಪ್ರಿಯ ಕಾದಂಬರಿಕಾರ ಭೈರಪ್ಪಗೆ ಶುಭ ಹಾರೈಸಿ
ಕಾರಂತರನ್ನು ಬಿಟ್ಟರೆ, ಭೈರಪ್ಪನವರನ್ನು ನಗಿಸುವುದು ಭಾರಿ ಕಷ್ಟದ ಕೆಲ್ಸ ಮಾರಾಯ್ರೆ ಎಂದು ' ಫೋಟೋಗ್ರಾಫರ್'ಉದಯ್ ಜಾದೂಗಾರ್ ಹೇಳಿದ್ದುಂಟು. ಸಂತೆ ಶಿವರ ಎಂಬ ಸಣ್ಣ ಹಳ್ಳಿಯಿಂದ ಬಂದು ಇಂದು ವಿಶ್ವಖ್ಯಾತಿ ಗಳಿಸಿರುವುದರ ಹಿಂದೆ ಅಪ್ಪಟ ಶ್ರಮ ಅಡಗಿದೆ ಎಂಬುದು ಸರ್ವವಿದಿತ.
'ಆವರಣ' ಆಗಲಿ 'ಕವಲು' ಕಾದಂಬರಿ ಸೃಷ್ಟಿಸಿರುವ ಯಶಸ್ಸು, ಗೊಂದಲ, ಚರ್ಚೆಯನ್ನು ಮುಕ್ತಮನಸ್ಸಿನಿಂದ ಒಪ್ಪಿಗೊಳ್ಳುವುದು ಭೈರಪ್ಪ ಅವರ ದೊಡ್ಡತನ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಹುಡುಕಾಟ ಮಾಡುತ್ತಾ ಯಾವುದಾದರೊಂದು ವಿಷಯದ ಮೇಲೆ ಸಂಪೂರ್ಣ ಜ್ಞಾನ ಪಡೆಯದೇ ಏನನ್ನೂ ಮಂಡಿಸದ ಭೈರಪ್ಪನವರ ಹುಡುಕಾಟದ ಉತ್ಸುಕತೆ ಅವರನ್ನು ಇನ್ನೂ ಸಾಹಿತ್ಯಕವಾಗಿ ಜನಪ್ರಿಯವಾಗಿರಿಸಿವುದು ಎಂಬುದಂತೂ ಸತ್ಯ.
ಇತ್ತೀಚಿಗೆ ವೆಬ್ ಲೋಕಕ್ಕೂ ಕಾಲಿರಿಸಿದ ಹಿರಿಯ ಕಾದಂಬರಿಕಾರ, ಜನಪ್ರಿಯ ಸಾಹಿತಿ ಭೈರಪ್ಪನವರಿಗೆ ದಟ್ಸ್ ಕನ್ನಡ ತಂಡ ಶುಭಹಾರೈಸುತ್ತದೆ. ಅಂದ ಹಾಗೆ ಭೈರಪ್ಪನವರ ವೆಬ್ ತಾಣದ ಪ್ರಕಾರ ಅವರ ಜನ್ಮದಿನ ಆಗಸ್ಟ್ 20 ರಂದು ಎಂದಿದೆ.
ಎನಿವೇ, ಯಾವುದೂ ಸರಿ ಯಾವುದು ತಪ್ಪು ನಿರ್ಧರಿಸುವ ಗೋಜಿಗೆ ಹೋಗದೆ ಅಂದು ಇನ್ನೊಮ್ಮೆ ಹಾರೈಸಿದ್ದರಾಯ್ತು. ಏನಂತೀರಾ?