ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸತ್ಯಂ ಹಗರಣ : ರಾಮ ರಾಜು ಇತರರಿಗೆ ಜಾಮೀನು
ಇದೇ ಹಗರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್, ಹಣಕಾಸು ವಿಭಾಗದ ಇಬ್ಬರು ಉದ್ಯೋಗಿಗಳಾದ ಶ್ರೀಶೈಲಂ ಮತ್ತು ವೆಂಕಟಪತಿ ರಾಜು, ಹಾಗು ಇತರ ಮೂವರು ಮಾಜಿ ಉದ್ಯೋಗಿಗಳಿಗೆ ಕೂಡ ಜುಲೈ 20ರಂದು ಆಂಧ್ರ ಹೈಕೋರ್ಟ್ ಜಾಮೀನು ನೀಡಿದೆ.
ಈ ಆರೋಪಿಗಳಿಗೆಲ್ಲ ಜಾಮೀನು ದೊರೆತರೆ ಎಲ್ಲ ದಾಖಲೆಗಳನ್ನು ನಾಶ ಮಾಡಬಹುದೆಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಗೋಪಾಲ ಸುಬ್ರಮಣಿಯಂ ಅವರು ವಾದಿಸಿದರೂ ಹೈಕೋರ್ಟ್ ಎಲ್ಲರಿಗೂ ಜಾಮೀನು ನೀಡಿದೆ.
ಬಿ ರಾಮಲಿಂಗ ರಾಜು ಅವರು ಸುಳ್ಳು ಲೆಕ್ಕಪತ್ರ ತೋರಿಸಿ ಏಳು ಸಾವಿರ ಕೋಟಿ ರು.ಗಳಷ್ಟು ಹಣವನ್ನು ಗುಳುಂ ಮಾಡಿ ತಾನೇ ಕಟ್ಟಿದ ಕಂಪನಿಗೆ ಮೋಸ ಮಾಡಿದ್ದರು. ಭಾರತದ ಇತಿಹಾಸದಲ್ಲೇ ಇಷ್ಟು ದೊಡ್ಡ ಮೋಸ ಕಾರ್ಪೋರೇಟ್ ವಲಯದಲ್ಲಿ ನಡೆದಿರಲಿಲ್ಲ. ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿ ರಾಮ ರಾಜುವನ್ನು, ರಾಮಲಿಂಗ ರಾಜು ತನ್ನೆಲ್ಲ ತಪ್ಪುಗಳನ್ನು ಒಪ್ಪಿಕೊಂಡ ಮೇಲೆ 2009ರಲ್ಲಿ ಬಂಧಿಸಲಾಗಿತ್ತು.
Comments
Story first published: Tuesday, July 20, 2010, 14:19 [IST]