ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆಗಾರ್ತಿ ಶುಭಾ ಹೈಕೋರ್ಟ್ ಗೆ ಮೇಲ್ಮನವಿ

By Mahesh
|
Google Oneindia Kannada News

Shubha
ಬೆಂಗಳೂರು, ಜು.20: ಭಾವಿಪತಿ ಹಾಗೂಇಂಟೆಲ್ ಟೆಕ್ಕಿ ಬಿ.ವಿ.ಗಿರೀಶ್ ಅವರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಪಡೆದಿದ್ದ ಸುಂದರ ಹಂತಕಿ ಶುಭಾ, ಈಗ ತ್ವರಿತ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸ್ವತಃ ಸಿವಿಲ್ ವಕೀಲೆಯಾಗಿರುವ ಶುಭಾ ಅವರು ತಂದೆ ಶಂಕರ ನಾರಾಯಣ ಹಾಗೂ ತಮ್ಮ ವಕೀಲ ಸಿವಿ ನಾಗೇಶ್ ಅವರ ಮಾರ್ಗದರ್ಶನದಂತೆ 17ನೇ ತ್ವರಿತ ನ್ಯಾಯಲಯದ ನ್ಯಾಯಧೀಶ ಎಸ್ ಕೆ ವಂಟಿಗೋಡಿ ಅವರು ನೀಡಿದ ತೀರ್ಪನ್ನುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ನಡೆದಿದ್ದ ಬಿ.ವಿ ಗಿರೀಶ್ (27)ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ,ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಭಾರತೀಯ ದಂಡ ಸಂಹಿತೆ 302,120 ಹಾಗೂ 201 ರ ಅನ್ವಯ ಜೀವಾವಧಿ ಶಿಕ್ಷೆ ಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಜು.14ರಂದು ಆದೇಶ ಹೊರಡಿಸಿತ್ತು.

ಶಿಕ್ಷೆ ಪ್ರಮಾಣ :ಅರುಣ ವರ್ಮಾಹಾಗೂ ದಿನೇಶ್ ಗೆ 50 ಸಾವಿರ ದಂಡ,ವೆಂಕಟೇಶ್ ಗೆ 1ಲಕ್ಷ ರು ದಂಡ, ಶುಭಾಳನ್ನು ನಾಲ್ಕನೆ ಅಪರಾಧಿ ಯಾಗಿ ಪರಿಗಣಿಸಿ 75 ಸಾವಿರ ರು ದಂಡ ವಿಧಿಸಲಾಗಿದೆ. ಶುಭಾಳಿಗೆ ಜೀವಾವಧಿ ಜೊತೆಗೆ ಹೆಚ್ಚುವರಿ 3 ವರ್ಷ ಶಿಕ್ಷೆ ನೀಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X