ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲೆಗಾರ್ತಿ ಶುಭಾ ಹೈಕೋರ್ಟ್ ಗೆ ಮೇಲ್ಮನವಿ
ಸ್ವತಃ ಸಿವಿಲ್ ವಕೀಲೆಯಾಗಿರುವ ಶುಭಾ ಅವರು ತಂದೆ ಶಂಕರ ನಾರಾಯಣ ಹಾಗೂ ತಮ್ಮ ವಕೀಲ ಸಿವಿ ನಾಗೇಶ್ ಅವರ ಮಾರ್ಗದರ್ಶನದಂತೆ 17ನೇ ತ್ವರಿತ ನ್ಯಾಯಲಯದ ನ್ಯಾಯಧೀಶ ಎಸ್ ಕೆ ವಂಟಿಗೋಡಿ ಅವರು ನೀಡಿದ ತೀರ್ಪನ್ನುಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ನಡೆದಿದ್ದ ಬಿ.ವಿ ಗಿರೀಶ್ (27)ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ,ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಭಾರತೀಯ ದಂಡ ಸಂಹಿತೆ 302,120 ಹಾಗೂ 201 ರ ಅನ್ವಯ ಜೀವಾವಧಿ ಶಿಕ್ಷೆ ಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಜು.14ರಂದು ಆದೇಶ ಹೊರಡಿಸಿತ್ತು.
ಶಿಕ್ಷೆ ಪ್ರಮಾಣ :ಅರುಣ ವರ್ಮಾಹಾಗೂ ದಿನೇಶ್ ಗೆ 50 ಸಾವಿರ ದಂಡ,ವೆಂಕಟೇಶ್ ಗೆ 1ಲಕ್ಷ ರು ದಂಡ, ಶುಭಾಳನ್ನು ನಾಲ್ಕನೆ ಅಪರಾಧಿ ಯಾಗಿ ಪರಿಗಣಿಸಿ 75 ಸಾವಿರ ರು ದಂಡ ವಿಧಿಸಲಾಗಿದೆ. ಶುಭಾಳಿಗೆ ಜೀವಾವಧಿ ಜೊತೆಗೆ ಹೆಚ್ಚುವರಿ 3 ವರ್ಷ ಶಿಕ್ಷೆ ನೀಡಲಾಗಿದೆ.
Comments
ಕೊಲೆ ಸಾವು ಟೆಕ್ಕಿ ಇಂಟೆಲ್ ಶುಭಾ ಗಿರೀಶ್ ಹೈಕೋರ್ಟ್ ಕ್ರೈಂ ವಿವೇಕನಗರ ಬನಶಂಕರಿ ಬೆಂಗಳೂರು ಬಿಎಂಎಸ್ ಕಾಲೇಜು intel techie murder crime beat girish shubha vivek nagar banashankari bangalore high court
Story first published: Tuesday, July 20, 2010, 12:26 [IST]