ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಡೂಟ ತಿಂದು ಮಲಗುವ ವೇದಿಕೆಯಲ್ಲ: ಈಶ್ವರಪ್ಪ
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸೌಧ ಇರುವುದು ನಾಡಿನ ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡಲೇ ಹೊರತು, ಬಾಡೂಟ ತಿಂದು ಮಜಾ ಮಾಡಲು ಅಲ್ಲ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿರುವುದನ್ನು ಅವರು ಖಂಡಿಸಿದರು.
ಈ ವಿಚಾರ ಕುರಿತು ಸದನದಲ್ಲಿ ಸುದೀರ್ಘ ಚರ್ಚೆ ನಡೆದು ಸರ್ಕಾರ ಉತ್ತರವನ್ನೂ ನೀಡಿದ ನಂತರ ಧರಣಿ ಕೈಗೊಂಡಿರುವ ಪ್ರತಿಪಕ್ಷಗಳ ನಿರ್ಧಾರವೇ ಸರಿಯಲ್ಲ ಎಂದರು. ನಾಡಿನ ಸಮಸ್ಯೆ ಪರಿಹರಿಸಬೇಕೆಂಬ ನಿಜವಾದ ಕಾಳಜಿ ಇದ್ದರೆ ಒಣ ಪ್ರತಿಷ್ಠೆ ಬಿಟ್ಟು ಸದನದ ಕಲಾಪದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸಲಹೆ-ಸೂಚನೆ ನೀಡಲಿ.
ಅದನ್ನು ಬಿಟ್ಟು ಪ್ರತಿಭಟನೆಯ ಹೆಸರಿನಲ್ಲಿ ವ್ಯರ್ಥವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಲೋಕಾಯುಕ್ತ ತನಿಖೆಗೆ ಸಿಎಂ ಅವರು ಸೂಚಿಸಿರುವಾಗ ಸಿಬಿಐ ತನಿಖೆ ಯಾಕೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
Comments
ಕೆಎಸ್ ಈಶ್ವರಪ್ಪ ವಿಧಾನಸೌಧ ಸಿದ್ದರಾಮಯ್ಯ ದೇವೇಗೌಡ ಗಣಿಗಾರಿಕೆ ಬಳ್ಳಾರಿ ಯಡಿಯೂರಪ್ಪ ಸಿಬಿಐ ks eshwarappa vidhana soudha siddaramaiah jds deve gowda mining yediyurappa cbi janardhana reddy
Story first published: Thursday, July 15, 2010, 14:13 [IST]