ಮತ್ತೆ ಪ್ರವಚನ ಆರಂಭಿಸಿದ ನಿತ್ಯಾನಂದ
ಇವು ನಟಿ ರಂಜಿತಾ ಜೊತೆಗಿನ ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಿಡದಿ ಧ್ಯಾನಪೀಠ ಆಶ್ರಮದ ನಗುಮೊಗದ ನಿತ್ಯಾನಂದ ಸ್ವಾಮಿ ಉಲಿದ ನುಡಿಗಳು. ಜೈಲಿನಿಂದ ಹೊರಬಂದ ನಂತರ ತನ್ನ ಭಕ್ತ ಸಮೂಹಕ್ಕೆ ನಿತ್ಯಾನಂದ ಪ್ರಥಮ ಬಾರಿಗೆ ಪ್ರವಚನ ನೀಡಿದ್ದಾರೆ.
ದೇಶ, ವಿದೇಶಗಳಿಂದ ಬಂದಿದ್ದ ನೂರಾರು ಭಕ್ತರಿಗೆ ಪ್ರವಚನ ನೀಡುತ್ತಾ, ನನ್ನ ಪ್ರಕರಣದ ನಂತರ ಮಾಧ್ಯಮ ಬಂಧುಗಳು ನನ್ನನ್ನು ಏನೆಲ್ಲಾ ಜರಿದರು. ಕೆಲ ಪತ್ರಿಕೆಗಳು ನನ್ನ ಹೆಸರನ್ನು ವಿಚಿತ್ರ ರೀತಿಯಲ್ಲಿ ಬಳಸಲು ಆರಂಭಿಸಿದರು. ಆದರೆ ನಾನು ಅದನ್ನೆಲ್ಲಾ ಸಹಸ್ರನಾಮ ಎಂದು ಭಾವಿಸಿದೆ. ಗೂಗಲ್ ನಲ್ಲಿ ನನ್ನ ಬಗ್ಗೆ ಅತಿ ಹೆಚ್ಚು ಜನ ಸರ್ಚ್ ಮಾಡಿದ್ದಾರೆ. ಮೈಕಲ್ ಜಾಕ್ಸನ್ ನಂತರ ಅತಿ ಹೆಚ್ಚು ಜನ ನನ್ನ ಹುಡುಕಾಟ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರವಚನಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಹೇರಿದ್ದ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಧ್ಯಾನಪೀಠ ಮತ್ತೆ ನಿತ್ಯಾನಂದರ ಪ್ರವಚನ ಏರ್ಪಡಿಸಿತ್ತು. ಮಾಧ್ಯಮ ಮತ್ತು ಪತ್ರಿಕೆಯವರಿಗೆ ನಿತ್ಯಾನಂದರ ಶಿಷ್ಯರು ಆಶ್ರಮ ಪ್ರವೇಶಿಸದಂತೆ ತಡೆಯೊಡ್ಡಿ ನಂತರ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಘಟನೆ ಕೂಡ ನಡೆದಿದೆ.