ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಸಿದ ಬಿದ್ದ ಆಸರೆ : ಏನ್ರೀ ಇದು ಸಿಎಂ
ಮನೆ ನಿರ್ಮಾಣ ಅತ್ಯಂತ ಕಳಪೆ ಮಟ್ಟದಲ್ಲಿದ್ದು, ಗುತ್ತಿಗೆದಾರರು ಬೇಕಾಬಿಟ್ಟಿ ಮನೆ ನಿರ್ಮಿಸುತ್ತಿರುವುದರ ಬಗ್ಗೆ ವರದಿಯಾಗಿದೆ. ಈಗಾಗಲೇ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳ ತೊಡಗಿದೆ. ಸರಿಯಾಗಿ ಸಿಮೆಂಟ್, ಕಬ್ಬಿಣ, ನೀರು ಉಪಯೋಗಿಸುತ್ತಿಲ್ಲ. ಗುತ್ತಿಗೆದಾರರು ತಮಗಿಷ್ಟ ಬಂದಂತೆ ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮನೆಗಳ ಗುಣಮಟ್ಟವನ್ನು ಪರಿಶೀಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮನೆಗಳಿಗೆ ಹಾಕಿದ್ದ ಮೇಲ್ಚಾವಣಿ ಕುಸಿದಿದ್ದು ರಾತ್ರಿಯೇ ಸ್ವಚ್ಚಗೊಳಿಸಲಾಗಿದೆ. ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಸರಿಯಾದ ಕಾಂಕ್ರೀಟ್ ಬಳಸಲಾಗುತ್ತಿಲ್ಲ. ಗುಣಮಟ್ಟ ಕಾಯ್ದು ಕೊಳ್ಳದಿದ್ದರೆ ಗುತ್ತಿಗೆ ಹಿಂಪಡೆಯಲಾಗುವುದು ಅಲ್ಲದೆ ಭಾರೀ ಮೊತ್ತದ ದಂಡ ವಿಧಿಸಲಾಗುವುದೆಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.
Comments
ಯಡಿಯೂರಪ್ಪ ಪ್ರವಾಹ ಆಸರೆ ಸಂತ್ರಸ್ಥರು ಉತ್ತರ ಕರ್ನಾಟಕ ಕೂಡಲಸಂಗಮ yediyurappa flood district news house north karnataka
Story first published: Wednesday, July 7, 2010, 11:43 [IST]