ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿ : ಸಯ್ಯದ್
ಹಾರ್ನಳ್ಳಿ ಸಮೀಪದ ಶಾಂತಿನಗರದ ಸಯ್ಯದ್ ಮುಕ್ತಮ್ ಪಾಷಾ, ಪತ್ನಿ ರೇಷ್ಮಾ ತಮ್ಮ ನಾಲ್ಕು ಮಕ್ಕಳ ಜೊತೆ ಧರಣಿ ನಡೆಸುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ಜಾರಿಗೆ ತರಬೇಕು. ಇಲ್ಲದಿದ್ದರೆ ತಾವು ಕುಟುಂಬ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪ್ಲಾಸ್ಟಿಕ್ ಬಾಟಲಿ ಕ್ರಿಮಿನಾಶಕ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ.
ಈ ಒತ್ತಾಯ ಹೇರಲು ಆರಂಭಿಸಿ ಹಲವು ತಿಂಗಳಾಯ್ತು. ಆ ಬಳಿಕ ತಮ್ಮ ಮೇಲೆ ಹಲ್ಲೆ ಯತ್ನ ನಡೆದವು. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತಾದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ. ಶಾಂತಿನಗರ ಮತ್ತು ಹಾರ್ನಳ್ಳಿ ಮುಸ್ಲಿಂಗಳಿಗೆ ಭೂಗತ ದೂರೆ ದಾವೂದ್ ಇಬ್ರಾಹಿಂ ಜೊತೆ ನಂಟು ಇದೆ. ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಸಯ್ಯದ್ ಮುಕ್ತಮ್ ಸರಕಾರವನ್ನು ಒತ್ತಾಯಿಸಿದ್ದಾರೆ.
Comments
ಗೋಹತ್ಯೆ ನಿಷೇಧ ಮುಸ್ಲಿಂ ಶಿವಮೂಗ್ಗ ಯಡಿಯೂರಪ್ಪ ಪ್ರತಿಭಟನೆ cow slaughter muslim yediyurappa protest shivamogga
Story first published: Friday, July 2, 2010, 11:24 [IST]