ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೈಸ್ : ದೇವೇಗೌಡರಿಗೆ ಒಂದು ಸುತ್ತಿನ ಜಯ
ಸಿಎಂ ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಳೆದ ರವಿವಾರ ಸಭೆ ಸೇರಿ ಸಂಸ್ಥೆಗೆ ಹೆಚ್ಚುವರಿ ಭೂಮಿ ನೀಡದಿರಲು ನಿರ್ಣಯಿಸಿದೆ. ಸಮಿತಿ ಕೈಗೊಂಡಿರುವ ನಿರ್ಣಯ ಕುರಿತು ಸುಪ್ರಿಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಯಿತು ಎಂದು ಅಡ್ವೋಕೇಟ್ ಜನರಲ್ ಕಚೇರಿ ಮೂಲಗಳು ತಿಳಿಸಿವೆ. 2004ರ ಒಪ್ಪಂದ ಪ್ರಕಾರ ಸರಕಾರ 776 ಎಕರೆ ಭೂಮಿ ನೀಡಬೇಕಿತ್ತು. ಮೂಲ ಒಪ್ಪಂದ ಉಲ್ಲಂಘಿಸಿ ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ಭೂಮಿ ನೀಡದಂತೆ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.
2004ರ ಪ್ರಕಾರ ಸರಕಾರ ಭೂಮಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ನೈಸ್ ಸಂಸ್ಥೆ ಸುಪ್ರಿಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ವಿಭಾಗೀಯ ಪೀಠ ಒಪ್ಪಂದದ ಪ್ರಕಾರ ಸಂಸ್ಥೆಗೆ ಭೂಮಿ ನೀಡುವಂತೆ ಸೂಚನೆ ನೀಡಿತ್ತು.
Comments
ಯಡಿಯೂರಪ್ಪ ನೈಸ್ ಸುಪ್ರಿಂಕೋರ್ಟ್ ದೇವೇಗೌಡ ಬಿಎಂಐಸಿ ಅಶೋಕ್ ಖೇಣಿ ಅಶೋಕ್ ಹಾರನಹಳ್ಳಿ ಪ್ರತಿಭಟನೆ yediyurappa nice supreme court deve gowda bmic ashok kheny ashok haranahalli protest
Story first published: Wednesday, June 30, 2010, 10:20 [IST]