ಹಾಲಪ್ಪನಿಗೆ ಷರತ್ತುಬದ್ಧ ಜಾಮೀನು ಮಂಜೂರು
ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಆದೇಶದ ಪ್ರತಿಯನ್ನು ಶಿವಮೊಗ್ಗ ಕೋರ್ಟ್ಗೆ ಹಾಜರುಪಡಿಸಿ, ಅಲ್ಲಿಂದ ಬಿಡುಗಡೆಯ ಅನುಮತಿ ಪಡೆಯಬೇಕು. ನಂತರ ಶಿವಮೊಗ್ಗ ಠಾಣೆಗೆ ಹಾಜರಾಗಬೇಕಾಗಿದೆ. ಈ ಪ್ರಕರಣದಲ್ಲಿ ವೆಂಕಟೇಶ್, ಚಂದ್ರಾವತಿ ಕುಟುಂಬದವರು ಸೇರಿದಂತೆ ಸುಮಾರು 41 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಜಾಮೀನು ಮಂಜಾರಾತಿಗೆ ಪ್ರಾಸಿಕ್ಯೂಟರ್ ನಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ ಎಂದು ಹಾಲಪ್ಪ ಪರ ವಕೀಲ ಅಶೋಕ್ ಭಟ್ ತಿಳಿಸಿದರು.
ಷರತ್ತುಗಳೇನು:
*ಹಾಲಪ್ಪ
ಅವರು
15
ದಿನಕ್ಕೊಮ್ಮೆ
ಶಿವಮೊಗ್ಗ
ಠಾಣಾಧಿಕಾರಿ
ಮುಂದೆ
ಹಾಜರಾಗಿ
ಸಹಿ
ಹಾಕಬೇಕು.
*
ಶಿವಮೊಗ್ಗದಿಂದ
ಹೊರಹೋಗಬೇಕಿದ್ದರೆ
ಮ್ಯಾಜಿಸ್ಟ್ರೇಟ್
ಅವರ
ಪರವಾನಿಗೆ
ಅಗತ್ಯ.
*
ತನಿಖೆಗೆ
ಸಹಕರಿಸಬೇಕು.ಸಾಕ್ಷ್ಯ
ನಾಶ,
ಸಾಕ್ಷಿಗಳಿಗೆ
ಬೆದರಿಕೆ
ಒಡ್ಡುವಂತಿಲ್ಲ
*
1ಲಕ್ಷರು
ವೈಯಕ್ತಿಕ
ಬಾಂಡ್
ಭದ್ರತಾ
ಠೇವಣಿ
ನೀಡಬೇಕು
*ಇಬ್ಬರ
ಷ್ಯೂರಿಟಿ
ಸಹಿ
ಜಾಮೀನು
ಮಂಜೂರು
ಮಾಡಲು
ಅಗತ್ಯ.
ವೆಂಕಟೇಶ್ ಮೂರ್ತಿ ಅವರ ಪತ್ನಿ ಚಂದ್ರಾವತಿ ಮೇಲಿನ ನೀಡಿರುವ ಅತ್ಯಾಚಾರ ಆರೋಪ ಪ್ರಕರಣ ಕುರಿತಂತೆ ಹಾಲಪ್ಪ ಅವರ ವಿಚಾರಣೆ ಪೂರ್ಣಗೊಂಡಿದ್ದು, ಇನ್ನು ಅವರ ತನಿಖೆಯ ಅಗತ್ಯವಿಲ್ಲ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಒಂದು ದಿನವೂ ಸೆರೆಮನೆವಾಸ ಅನುಭವಿಸದ ಹಾಲಪ್ಪ ಅವರಿಗೆ ಕೊನೆಗೂ ಜಾಮೀನು ಸಿಕ್ಕಿರುವುದು ತಾತ್ಕಾಲಿಕ ರಿಲೀಫ್ .