ಟ್ವಿಟ್ಟರ್ ನಲ್ಲಿ ಖಾತೆ ತೆರೆದ ದೇವೇಗೌಡ್ರು
ದೇಶದ, ರಾಜ್ಯದ, ಜಿಲ್ಲೆಯ, ತಾಲ್ಲೂಕಿನ, ಹಳ್ಳಿಗಳ ರಾಜಕೀಯ ವಿಚಾರಗಳಲ್ಲದೆ ರೈತರು ಕೃಷಿ ಬೇಸಾಯ ಚಟುವಟಿಕೆ, ಬೆಂಬಲ ಬೆಲೆ ಕೃಷಿ ಮಾರುಕಟ್ಟೆ ಮುಂತಾದ ವಿಷಯಗಳ ಕುರಿತಂತೆ ಗೌಡರ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಟ್ವಿಟ್ಟರ್ ಬಳಗದ ಸದಸ್ಯರು ಇನ್ನುಮುಂದೆ ಬೆರಳ ತುದಿಯ ಸ್ಪರ್ಷ ಮಾತ್ರದಿಂದಲೇ ಪಡೆಯಬಹುದು ಎಂದು ಈ ಮೂಲಕ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.
ದೇವೇಗೌಡರು ಅಂತರ್ಜಾಲ ತಾಣ ಪ್ರವೇಶ ಮಾಡಿದ್ದಾರೆ ಎಂಬ ವಿಷಯ ಕೇಳಿದ ದಳದ ಅಭಿಮಾನಿಯೊಬ್ಬರು ತಮ್ಮ ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ. ಇಂಟರ್ನೆಟ್ಟಿನಲ್ಲಿ ಲಭ್ಯವಾಗುವ ಕರ್ನಾಟಕದ ಪತ್ರಿಕೆಗಳನ್ನು ಓದಿ ಗೌಡರ ಒಲವು ನಿಲವುಗಳನ್ನು ತಿಳಿಯುತ್ತಿದ್ದ ಅವರ ಅಭಿಮಾನಿ ವರ್ಗಕ್ಕೆ ಟ್ವಿಟ್ಟರ್ ಕೊಂಡಿಯ ಮೂಲಕ ತಮ್ಮ ನಾಯಕರು ಮುಖಾಮುಖಿಗೆ ಸಿಗುತ್ತಿರುವ ಸಂಗತಿ ಅತೀವ ಸಂತಸ ಉಂಟುಮಾಡಿದೆ.
ಕೋಟ್ಯಂತರ ಟ್ವಿಟ್ಟರ್ ಬಳಕೆದಾರರ ಪರವಾಗಿ ಎಚ್ ಡಿ ದೇವೇಗೌಡ ಅವರಿಗೆ ಸಾಮಾಜಿಕ ಸಂಪರ್ಕ ತಾಣಕ್ಕೆ ಸ್ವಾಗತ ಕೋರಲಾಗುತ್ತಿದೆ. ದೇವೇಗೌಡರು ಅಂತರ್ಜಾಲ ಪ್ರವೇಶಿಸಿರುವ ಬಗ್ಗೆ ಸಮೂಹ ಮಾಧ್ಯಮಗಳ ಮೂಲಕ ಅವರು ಅಧಿಕೃತ ಪ್ರಚಾರ ನೀಡಿದರೆ ಅವರ ಟ್ವಿಟ್ಟರ್ ಗೂಡು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ!