ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಘವೇಶ್ವರ ಸ್ವಾಮೀಜಿ ಸಿಡಿ. ನಾಲ್ವರು ಶರಣಾಗತಿ

By Mahesh
|
Google Oneindia Kannada News

Raghaveshwara Bharathi Swamiji
ಕಾರವಾರ, ಜೂ.18: ಹೊಸನಗರದ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಸ್ವಾಮೀಜಿಗಳ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳು ಕುಮಟಾ ಜೆಎಂಎಫ್ ಸಿ ನ್ಯಾಯಲಕ್ಕೆ ಶರಣಾಗಿದ್ದಾರೆ.ಶ್ರೀಗಳನ್ನೇ ಹೋಲುವ ವ್ಯಕ್ತಿಯನ್ನು ಬಳಸಿ ನಕಲಿ ಅಶ್ಲೀಲ ವಿಡಿಯೋ ಚಿತ್ರಿಕರಿಸಲಾಗಿತ್ತು.

ಶರಣಾದ ಆರೋಪಿಗಳಲ್ಲಿ ಗಣೇಶ ವಾಸುದೇವ ಜೋಗಳೇಕರ ಸೋಮನಾಥ ವಾಸುದೇವ ಜೋಗಳೆಕರ ಅವರನ್ನು ಜೂ.19 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಿಸಿಕೊಳ್ಳಲು ಕೋರ್ಟ್ ಆದೇಶಿಸಿದೆ. ಉಳಿದಿಬ್ಬರು ಆರೋಪಿಗಳಾದ ಪಣಿರಾಜ ಗೋಪಿ ಹಾಗೂ ಕೃಷ್ಣ ಯೋಗ ಭಟ್ ಅವರಿಗೆ ಜೂ.30 ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಿರೀಕ್ಷಣಾ ಜಾಮೀನು ತಿರಸ್ಕಾರವಾದ ಹಿನ್ನೆಲೆಯಲ್ಲಿ ಆರೋಪಿಗಳು ನ್ಯಾಯಲಯಕ್ಕೆ ಶರಣರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ13 ಜನರನ್ನು ಬಂಧಿಸಲಾಗಿದೆ. ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನಕಲಿ ಸಿಡಿ ಸೃಷ್ಟಿಸಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X