ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು ವೈದ್ಯರ ಗಂಟಲು ಮೀನುಗಾರಿಕೆ!
ಅರಬ್ ದೇಶದಲ್ಲಿ ಉದ್ಯೋಗಿಯಾಗಿರುವ ಕೇರಳದ ಕಾಂಜಗಾಡ್ ನ ಮೊಹಮ್ಮದ್ ಕುನ್ನಿ ಎನ್ನುವ ವ್ಯಕ್ತಿ ರಜಾದಿನ ಕಳೆಯಲು ತನ್ನ ಊರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಊರಿನ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ . ಒಂದು ಮೀನನ್ನು ಹಿಡಿದು ಅದನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ಇನ್ನೊಂದು ಮೀನು ಹಿಡಿಯುವ ಪ್ರಯತ್ನದಲ್ಲಿದ್ದಾಗ ಬಾಯಲ್ಲಿದ್ದ ಮೀನು ಗಂಟಲೊಳಗೆ ಅಕಸ್ಮಾತ್ತಾಗಿ ಜಾರಿ ಬಿತ್ತು. ಘಟನೆ ನಡೆದ ನಾಲ್ಕು ಗಂಟೆಯ ತರುವಾಯ ಆಸ್ಪತ್ರೆಗೆ ವಿಷಮ ಪರಿಸ್ಥಿತಿಯಲ್ಲಿ ಈ ವ್ಯಕ್ತಿಯನ್ನು ದಾಖಲಿಸಲಾಯಿತು.
ಡಾ. ಅಶೋಕ್ ಶೆಟ್ಟಿ ಮತ್ತು ಡಾ.ಗಣಪತಿ ನೇತ್ರತ್ವದ ವೈದ್ಯರ ತಂಡ ಸುಮಾರು ಒಂದು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ 13 ಸೆಂಟಿಮೀಟರ್ ಉದ್ದದ ಮೀನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ನೆಪ್ರೋಸ್ಕೋಪ್ ಮೂಲಕ ಮೀನನ್ನು ಹೊರ ತೆಗೆಯಲಾಗಿದ್ದು ರೋಗಿ ಈಗ ಗುಣಮುಖ ನಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.
Comments
ಮಂಗಳೂರು ಮೀನುಗಾರಿಕೆ ಶಸ್ತ್ರಚಿಕಿತ್ಸೆ ಕೇರಳ ಮೀನು ಆರೋಗ್ಯ mangaluru fishing fish surgery district news kerala health
Story first published: Thursday, June 17, 2010, 16:15 [IST]