ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಚ್ಚಾಟಿತ ನಾಯಕ ಜಸ್ವಂತ್ ಮರಳಿ ಬಿಜೆಪಿಗೆ
ಜಸ್ವಂತ್ Jinnah-India, Partition, Independenceಪುಸ್ತಕದಲ್ಲಿ ಪಾಕಿಸ್ತಾನದ ರಾಷ್ಟ್ರಪಿತ ಮಹಮ್ಮದ್ ಆಲಿ ಜಿನ್ನಾ ಅವರನ್ನು ಹಾಡಿ ಹೊಗಳಿದ್ದು ಅವರ ಉಚ್ಚಾಟನೆಗೆ ಕಾರಣವಾಗಿತ್ತು. ಆದರೆ, ಜಸ್ವಂತ್ ಮರು ಸೇರ್ಪಡೆ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಜಸ್ವಂತ್ ಸಿಂಗ್ ಪಕ್ಷಕ್ಕೆ ಮರಳುವ ಬಗ್ಗೆ ಈಗಲೇ ಏನನ್ನು ಹೇಳಲಾಗದು. ಬಿಜೆಪಿಯ ಸಂಸದೀಯ ಮುಖ್ಯಸ್ಥರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು . ಪಕ್ಷದ ಅಧ್ಯಕ್ಷ ಈ ಬಗ್ಗೆ ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.
ಜಸ್ವಂತ್ ತಮ್ಮ ಪುಸ್ತಕದಲ್ಲಿ ಜಿನ್ನಾರನ್ನು ಜಾತ್ಯಾತೀತ ನಾಯಕ್ ಎಂದಿದ್ದರಲ್ಲದೆ, ಜವಹರ್ ಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರನ್ನು ಭಾರತ ವಿಭಜನೆಗೆ ಕಾರಣೀ ಪುರುಷರು ಎಂದು ಜರೆದಿದ್ದರು. ಕಳೆದ ವರ್ಶ ಆಗಸ್ಟ್ ನಲ್ಲಿ ಶಿಮ್ಲಾದಲ್ಲಿ ನಡೆದ ಬಿಜೆಪಿ ಚಿಂತನ್ ಭೈಠಟ್ ನಲ್ಲಿ ಜಸ್ವಂತ್ ಉಚ್ಚಾಟಿಸಲು ತೀರ್ಮಾನಿಸಲಾಗಿತ್ತು.
ಜಸ್ವಂತ್ ಸಿಂಗ್ ಬಿಜೆಪಿ ಅನಂತ್ ಕುಮಾರ್ ಮೊಹ್ಮದ್ ಅಲಿ ಜಿನ್ನಾ ನವದೆಹಲಿ jaswant singh bjp jawaharlal nehru mohammed ali jinnah new delhi
Story first published: Wednesday, June 16, 2010, 13:38 [IST]