ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಪಾಂಡೆ, ಡಿಕೆಶಿ ಪರಸ್ಪರ ಕೆಸರೆರಚಾಟ

By Mahesh
|
Google Oneindia Kannada News

DK Shivakumar
ಬೆಂಗಳೂರು, ಜೂ.13: ದೆಹಲಿಯಲ್ಲಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಬಂದ ಇಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸರ್ವಾಧಿಕಾರಿ ಧೋರಣೆ ಖಂಡಿಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೆರೆ ಪರಿಹಾರ ನಿಧಿ ದುರ್ಬಳಕೆಗೂ ನನಗೂ ಸಂಬಂಧವಿಲ್ಲ. ದೇಶಪಾಂಡೆ ಅವರೇ ಹೊಣೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸದಿಂದ ಜನ ದೇಣಿಗೆ ನೀಡಿದ್ದಾರೆ. ಆದರೆ ಅದು ಸದ್ವಿನಿಯೋಗವಾಗದಿದ್ದರೆ ನಾನೇನು ಮಾಡಲಿ. ನಾನು ಪಕ್ಷದ ಶಿಸ್ತಿನ ನಾಯಿ .ರಾಜಕೀಯ ಮತ್ತು ಹಣಕಾಸು ವಿಷಯವಾಗಲಿ ದೇಶಪಾಂಡೆ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲಎಂದು ಡಿಕೆಶಿವಕುಮಾರ್ ಸುದ್ದಿಗಾರರಿಗೆ ಹೇಳಿದರು.

ಹೈಕಮಾಂಡ್ ನಿರ್ಧರಿಸಲಿ: ನೆರೆ ಪರಿಹಾರ ನಿಧಿ ದುರ್ಬಳಕೆ, ಕೆಪಿಸಿಸಿಯಲ್ಲಿ ಕಾರ್ಯ ನಿರ್ವಹಣೆ ಬಗ್ಗೆ ಇರುವ ಗೊಂದಲದ ಬಗ್ಗೆ ಹೈ ಕಮಾಂಡ್ ಗೆ ಎಲ್ಲಾ ಮಾಹಿತಿ ನೀಡಿದ್ದೇನೆ. ತಪ್ಪು ಮಾಡಿದ್ದರೆ ತಲೆ ಕೊಡಲು ಸಿದ್ಧ . ಹಣ ದುರ್ಬಳಕೆ ಬಗ್ಗೆ ಎಐಸಿಸಿ ತನಿಖೆ ನಡೆಸಲಿ.ನನಗೆ ಯಾವುದೇ ಸ್ಥಾನದ ಆಕಾಂಕ್ಷೆಯಿಲ್ಲ ಎಂದು ಡಿಕೆಶಿ ಹೇಳಿದರೆಉ.

English summary
Flood Relief Fund
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X