ಮಂಗಳೂರು ಒನ್ ಕೇಂದ್ರಕ್ಕೆ ಚಾಲನೆ
ಬುಧವಾರ ಮಧ್ಯಾಹ್ನ ಮಹಾನಗರಪಾಲಿಕೆ ಕೇಂದ್ರ ಕಚೇರಿಯಲ್ಲಿ ದ.ಕ.ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಜೆ.ಕೃಷ್ಣ ಪಾಲೇಮಾರ್ ಮಂಗಳೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಗಳ ಉದ್ಘಾಟಿಸಿದರು.
ಮಂಗಳೂರು ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಎಲೆಕ್ಟ್ರಿಸಿಟಿ ಬಿಲ್, ಬಿಎಸ್ಸ್ಸೆನ್ನೆಲ್ ಮೊಬೈಲ್ ಬಿಲ್ ಪಾವತಿ ಅಲ್ಲದೆ ಪಾಸ್ ಪಾರ್ಟ್ ಗೆ ಅರ್ಜಿ ಕೂಡಾ ಹಾಕಬಹುದು. ಎಲ್ಲಾ ಸೌಲಭ್ಯಗಳನ್ನು ಒಂದೇ ಕಡೆ ನೀಡುವ ನಿಟ್ಟಿನಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಇ ಆಡಳಿತ ವ್ಯವಸ್ಥೆಯ ಕಾರ್ಯದರ್ಶಿ ಎಂಎಂ ವಿದ್ಯಾಶಂಕರ್ ಹೇಳಿದರು.
ಸಚಿವರು, ಅಧಿಕಾರಿಗಳ ದಂಡು : ನಗರಾಭಿವೃದ್ಧಿ,ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ , ಗೃಹ ಸಚಿವ ವಿಎಸ್ ಆಚಾರ್ಯ, ಕರ್ನಾಟಕ ರಾಜ್ಯದ ಕೈಗಾರಿಕೆ ಹಾಗೂ ಬಂಡವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಯೋಗೀಶ್ ಭಟ್ ಹಾಗೂ
ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್,ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ,ನಗರಪಾಲಿಕೆ ಮಹಾಪೌರರಾದ ಶ್ರೀಮತಿ ರಜನಿ ದುಗ್ಗಣ್ಣ ಮುಂತಾದವರು ಉಪಸ್ಥಿತರಿದ್ದರು.