ಹರ್ಯಾಣದ ಮತ್ತೊಬ್ಬ ಕಾಮುಕ ಪೊಲೀಸ್
ಸುಮಾರು ಒಂಭತ್ತು ವರ್ಷಗಳ ಕೆಳಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಐಜಿಪಿ ಎಂಎಸ್ ಅಹ್ಲಾವತ್ ಅವರು, ವಿಧವೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ 2002 ರಲ್ಲೇ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಹರ್ವಿಂದರ್ ಕೌರ್ ಅವರ ಪ್ರತಿಭಟನೆಗೆ ಕೊನೆಗೂ ಬೆಲೆ ಸಿಕ್ಕಿ, ಕೆಲವು ತಿಂಗಳುಗಳ ಹಿಂದೆ ನಿವೃತ್ತಿಯಾದ ಐಜಿಪಿ ಅಹ್ಲಾವತ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದು, FIR ದಾಖಲಿಸಿಕೊಂಡಿದ್ದಾರೆ.
ವಿಡಿಯೋ: ಹರ್ಯಾಣದ ಮಾಜಿ ಐಜಿಪಿಯಿಂದ ಲಜ್ಜೆಗೆಟ್ಟ ಕೆಲ್ಸ
ರುಚಿಕಾ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಎಸ್ ಸಿಎಸ್ ರಾಥೋಡ್ ತನ್ನ ಪ್ರಭಾವ ಬೀರಿ ಹೇಗೆ ಎಲ್ಲದರಿಂದ ತಪ್ಪಿಸಿಕೊಳ್ಳುತ್ತಿದ್ದನೋ ಅಹ್ಲಾವತ್ ಕೂಡಾ ಅದೇ ರೀತಿ ಮಾಡಿದ. ಆಗ ಡಿಜಿಪಿ ಆಗಿದ್ದ ರಾಥೋಡ್ ಬೆಂಬಲ ಅಹ್ಲಾವತ್ ಗಿತ್ತು .
ಸಿಎಂ ನಿವಾಸದ ಎದುರು ನಾನು ಉಪವಾಸ ಸತ್ಯಾಗ್ರಹ, ಆತ್ಮಹತ್ಯೆ ಪ್ರಯತ್ನ ಮಾಡಿದ ನಂತರ ವಿಶೇಷ ತನಿಖಾ ತಂಡ ರಚಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 327, 354 ಮತ್ತು 506ಗಳಡಿಯಲ್ಲಿ ಅನ್ವಯ ಕೇಸ್ ದಾಖಲಾದ ಮೇಲೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ಮೊರೆ ಹೋದೆ ಆದರೆ, ಹಿರಿಯ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲು ಯಾರು ಸಿದ್ಧರಿರಲಿಲ್ಲ.ನ್ಯಾಯ ಸಿಗುವವರೆಗೆ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಕೌರ್ ಸುದ್ದಿಗಾರರಿಗೆ ತಿಳಿಸಿದರು.