ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮದ್ಯದ ದೊರೆ ಮಲ್ಯ ರಾಜ್ಯಸಭೆಗೆ
ಮೂರು ಪಕ್ಷಗಳಲ್ಲೂ ನಾಲ್ಕನೇ ಅಭ್ಯರ್ಥಿ ಗೆಲ್ಲಿಸಲು ಅಗತ್ಯ ಶಾಸಕರ ಸಂಖ್ಯಾ ಬಲವಿರಲಿಲ್ಲ. ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಬೆಂಬಲಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಿಲ್ಲಬೇಕಾದ ಪ್ರಸಂಗ ಎದುರಾಗಿತ್ತು. ಜೆಡಿಎಸ್ ಮಲ್ಯ ಅವರಿಗೆ ಫುಲ್ ಸಪೋರ್ಟ್ ನೀಡುವುದಾಗಿ ಹೇಳಿದೆ. ಬಿಜೆಪಿ ಸಹ ಬೆಂಬಲಿಸುವ ಸಾಧ್ಯತೆಯಿದೆ. ಹಾಗಾಗಿ ಜೆಡಿಎಸ್ -ಕಾಂಗ್ರೆಸ್ ನಡುವೆ ನಡೆದಿದ್ದ ಮೈತ್ರಿ ಮಾತುಕತೆ ಮುರಿದುಬಿದ್ದ ಕಾರಣ ನೀಡುವ ಚರ್ಚೆ ಎಲ್ಲ ಪಕ್ಷಗಳಲ್ಲೂ ನಡೆದಿದೆ.
ಬೆಂಬಲಕ್ಕೆ ಮೀನಾಮೇಷ: ಮದ್ಯ ದೊರೆ ವಿಜಯ ಮಲ್ಯ ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅವರನ್ನು ಬೆಂಬಲಿಸುವ ಬಗ್ಗೆ ಜೆಡಿಎಸ್ನಲ್ಲಿ ಭಿನ್ನಾಭಿಪ್ರಾಯವಿತ್ತು. ಇಂದು ನಡೆದ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯ ನಂತರ ಮಲ್ಯ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಈ ಮಧ್ಯೆ ಇಂದು ಸುದ್ದಿಗಾರರೊಡನೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಜೊತೆ ಮೈತ್ರಿ ಮುರಿದು ಬಿದ್ದಿರುವುದನ್ನು ಖಚಿತಪಡಿಸಿದರು.
Comments
ವಿಜಯ್ ಮಲ್ಯ ರಾಜ್ಯಸಭೆ ಚುನಾವಣೆ ಜೆಡಿಎಸ್ ಬಿಜೆಪಿ ಯುಬಿ ಗ್ರೂಪ್ ಕಾಂಗ್ರೆಸ್ ಕರ್ನಾಟಕ vijay mallya rajya sabha election bjp jds congress karnataka mp ub group
Story first published: Monday, June 7, 2010, 15:02 [IST]