ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರೂಜಿ ಮೇಲೆ ಗುಂಡು ಹಾರಿಸಿದ್ದು ಉಗ್ರರೆ?

By Rajendra
|
Google Oneindia Kannada News

Ravishankar Guruji
ಬೆಂಗಳೂರು, ಜೂ.1: ಗುರೂಜಿ ಮೇಲೆ ಗುಂಡು ಹಾಸಿದ ಘಟನೆಯಲ್ಲಿ ಯಾರ ಕೈವಾಡವಿದೆ ಎಂಬುದು ಇನ್ನೂ ನಿಗೂಢವಾಗಿದೆ. ಗುಂಡು ಹಾರಿಸಿದವರು ಉಗ್ರರೆ? ಅಥವಾ ನಕ್ಸಲರೆ? ರವಿಶಂಕರ್ ಅವರನ್ನೇ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದೇಕೆ? ದಾಳಿಯಲ್ಲಿ ಗಾಯಗೊಂಡಿರುವ ವಿನಯಕುಮಾರ್ ಹಾಗೂ ಗುಂಡು ಹಾರಿಸಿದ ವ್ಯಕ್ತಿಯ ನಡುವೆ ವೈಷಮ್ಯ ವಿತ್ತೆ? ಎಂಬ ಅನುಮಾನಗಳಿಗೆ ಉತ್ತರ ಇನ್ನೂ ಸಿಕ್ಕಿಲ್ಲ.

ದಾಳಿ ನಡೆದಾಗ ಗುರೂಜಿ ಸ್ಥಳದಲ್ಲಿರಲಿಲ್ಲ ಎಂಬುದು ಪೊಲೀಸರ ವಾದ. ಆದರೆ ದಾಳಿ ನಡೆದಾಗ ತಾವು ಕಾರು ಹತ್ತುತ್ತಿದ್ದೆ ಎನ್ನುತ್ತಾರೆ ಗುರೂಜಿ. ಈ ದಾಳಿಗೆ ಕಾರಣ ಏನು? ದಾಳಿಯಲ್ಲಿ ಯಾರ ಕೈವಾಡ ಇರಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಇನ್ನು ನಿಗೂಢವಾಗಿದೆ.

ಆಶ್ರಮಕ್ಕೆ ಭದ್ರತೆ: ಸಿಎಂ
ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನು ಗುರಿಯಾಗಿ ಇರಿಸಿಕೊಂಡು ನಡೆದ ದಾಳಿ ಅಲ್ಲ ಇದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಘಟನೆಯಿಂದ ಶ್ರೀಗಳು ಸ್ವಲ್ಪವೂ ವಿಚಲಿತರಾಗಿಲ್ಲ. ಅದು ಅವರ ಮನೋಸ್ಥೈರ್ಯವನ್ನು ತೋರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ. ರವಿಶಂಕರ್ ಗುರೂಜಿ ಹಾಗೂ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ವಿಶೇಷ ಭದ್ರತೆ ನೀಡಲಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಗುರೂಜಿ ದೇಶದ ಆಸ್ತಿ
ವಿಶ್ವಶಾಂತಿಗಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಗುರೂಜಿ ಈ ದೇಶದ ಆಸ್ತಿ. ರವಿಶಂಕರ್ ಗುರೂಜಿ ಅವರಿಗೆ ಭದ್ರತೆ ಒದಗಿಸುವುದು ಕೇಂದ್ರ ಹಾಗೂ ರಾಜ್ಯದ ಸರಕಾರದ ಕರ್ತವ್ಯ ಎಂದು ಸಂಸದ ಅನಂತಕುಮಾರ್ ಹೇಳಿದ್ದಾರೆ. ಗುಂಡಿನ ದಾಳಿಯಲ್ಲಿ ಉಗ್ರರ ಕೈವಾಡ ಏನಾದರೂ ಇದೆಯೇ? ಎಂಬ ಅಂಶವನ್ನು ಪತ್ತೆಹಚ್ಚುವಂತೆ ಅನಂತಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X