ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರಪುರದಿಂದ ಯಮಪುರಿ ಸೇರಿದ ಬಸ್

By Mahesh
|
Google Oneindia Kannada News

KSRTC bus accident Challakere
ಚಳ್ಳಕೆರೆ, ಮೇ. 30: ಯಾದಗಿರಿ ಜಿಲ್ಲೆಯ ಸುರುಪುರದಿಂದ ಬೆಂಗಳೂರು ಕಡೆಗೆ ಹೊರಟಿದ್ದ ರಾಜ್ಯರಸ್ತೆ ಸಾರಿಗೆ ಬಸ್ , ಚಾಲಕನ ನಿರ್ಲಕ್ಷ್ಯ ದಿಂದ ಯಮಪುರಿಗೆ ಸೇರಿದ ದಾರುಣ ಘಟನೆ ಇಂದು ಮುಂಜಾನೆ ನಡೆದಿದೆ. ಈ ಬಸ್ ಅಪಘಾತದಲ್ಲಿ ಸುಮಾರು 10 ಮಕ್ಕಳು ಸೇರಿದಂತೆ 30 ಜನ ಸಾವನ್ನಪ್ಪಿದ್ದು, 28ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ 2.15 ರ ವೇಳೆಗೆ ಚಳ್ಳಕೆರೆ ಸಮೀಪದ ಸೇತುವೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ನಂತರ ಹಳ್ಳಕ್ಕೆ ಬಿದ್ದ ಬಸ್ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು 30 ಮಂದಿ ಸಜೀವ ದಹನವಾಗಿದ್ದಾರೆ. ಗಾಯಗೊಂಡವರನ್ನು ಚಳ್ಳಕೆರೆಯ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ದುರ್ಘಟನೆಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1ಲಕ್ಷ ರು ಪರಿಹಾರ ಹಾಗೂ ಗಾಯಗೊಂಡವರಿಗೆ 25 ಸಾವಿರ ರು.ಗಳ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಘೋಷಿಸಿದ್ದಾರೆ.

ಸಹಾಯವಾಣಿ:
ಚಳ್ಳಕೆರೆ ಆಸ್ಪತ್ರೆ: (08195) 222 644
ಚಳ್ಳಕೆರೆ ಪೊಲೀಸ್ ಠಾಣೆ: (08195) 250 239

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X