ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂದಿನ ವಾರ ಬಲಗಾಲಿಡಲಿದೆ ಮುಂಗಾರು
ಈ ಸಲದ ಮುಂಗಾರು ಬೇಆಪ್ ಬೆಂಗಾಲದ ಮೂಲಕ ಮೇ 17 ರಂದು ದೇಶವನ್ನು ಪ್ರವೇಶಿಸಿದೆ. ಮಂಗಳವಾರ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ಅಧಿಕೃತವಾಗಿ ಮುಂಗಾರು ಎಂಟ್ರಿ ಪಡೆದುಕೊಳ್ಳಲಿದೆ. ಈಗಾಗಲೇ ಕೇರಳದಲ್ಲಿ ತಂಪಾದ ಗಾಳಿ ಬೀಸತೊಡಗಿದ್ದು, ತಮಿಳುನಾಡು ಮತ್ತು ಕರ್ನಾಟಕದಲ್ಲಿರುವ ಬಿಸಿಲಿನ ತಾಪ ಸ್ವಲ್ಪ ಪ್ರಮಾಣದಲ್ಲಿ ತಗ್ಗಲಿದ್ದು, ಜೂನ್ ಮೊದಲ ವಾರ ಮಳೆ ಆರ್ಭಟ ಶುರುವಾಗಲಿದೆ ಎಂದು ಇಲಾಖೆ ತಿಳಿಸಿದೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ತಮಿಳುನಾಡು, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಜನರು ಬಿಸಿಲಿಲ ಹೊಡೆತಕ್ಕೆ ತತ್ತರಿಸಿಹೋಗಿದ್ದಾರೆ. ಮುಂಬರುವ ದಿನಗಳಲ್ಲಿ ಬಿಸಿಲಿನ ಪ್ರಖರ ಇಳಿಮುಖಗೊಳ್ಳಲಿದೆ. ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Comments
ಮುಂಗಾರು ಮಳೆ ಹವಾಮಾನ ಇಲಾಖೆ ಕರ್ನಾಟಕ ಕೇರಳ ತಮಿಳುನಾಡು ಬೆಂಗಳೂರು ಮಳೆ monsoon meteorological department karnataka coastal area kerala tamil nadu rain
Story first published: Saturday, May 29, 2010, 16:13 [IST]