ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಗತ ಪಾನೀಯ ಕುಡಿದು 80 ಜನ ಅಸ್ವಸ್ಥ

By Mahesh
|
Google Oneindia Kannada News

Dasaprakash Hotel
ಮೈಸೂರು,ಮೇ 27:ನಗರ ಖಾಸಗಿ ಹೋಟೆಲ್ ನಲ್ಲಿ ನಡೆದ ಮದುವೆ ಆರತಕ್ಷತೆ ಸಮಾರಂಭದಲ್ಲಿ ಸ್ವಾಗತ ಕೋರುವಾಗ ನೀಡುವ ಪಾನೀಯ ಸೇವಿಸಿ ವಧುವರರು ಸೇರಿದಂತೆ ಸುಮಾರು 80 ಜನ ಅಸ್ವಸ್ಥಗೊಂಡ ಘಟನೆ ನಡೆದಿದೆ.

ನೂತನ ದಂಪತಿ ಚಂದ್ರ ಮೌಳೀಶ್ವರ ಹಾಗೂ ತೇಜಸ್ವಿನಿ ಸೇರಿದಂತೆ ಅಸ್ವಸ್ಥಗೊಂದ ಎಲ್ಲರನ್ನೂ ಯಾದವ ಗಿರಿಯ ವಿಕ್ರಂ ಆಸ್ಪತ್ರೆ ಹಾಗೂ ಒಂಟಿ ಕೊಪ್ಪಲಿನ ವಿಕ್ರಂ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 76 ಜನಕ್ಕೆ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಉಳಿದ ನಾಲ್ವರಿಗೆ ಇನ್ನೂ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹಿರಿಯ ವೈದ್ಯರು ಹೇಳಿದರು.

ಮೇ.24 ರಂದು ಹಿನಕಲ್ ನ ಚಂದ್ರ ಮೌಳೀಶ್ವರ ಹಾಗೂ ಕುವೆಂಪುನಗರದ ತೇಜಸ್ವಿನಿ ಅವರ ವಿವಾಹ ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮೇ. 26 ರಂದು ಯಾದವಗಿರಿಯ ದಾಸಪ್ರಕಾಶ ಪ್ಯಾರಡೇಸ್ ಹೋಟೆಲ್ ನಲ್ಲಿ ಆರತಕ್ಷತೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ರಿಷಪ್ಷನ್ ಗೆ ಬಂದವರಿಗೆ ಸ್ವಾಗತ ಕೋರಿ ಹೋಟೆಲಿನವರು ನೀಡಿದ ತಂಪು ಪಾನೀಯ, ಅತಿಥಿಗಳಿಗೆ ವಿಷವಾಗಿ ಪರಿಣಮಿಸಿ ಎಲ್ಲರೂ ವಾಂತಿ ಮಾಡಿಕೊಳ್ಳತೊಡಗಿದರು. ಸುಮಾರು 80 ಜನರನ್ನು ಅಸ್ವಸ್ಥಗೊಳಿಸಿದ ತಂಪು ಪಾನೀಯವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಯಾದವ ಗಿರಿ ಪೊಲೀಸ್ ಠಾಣಾಧಿಕಾರಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X