ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ ಪದೇ ಪದೇ ಕೋರ್ಟ್ ಗೆ ಚಕ್ಕರ್
ಸಚಿವರಾದ ಜಿ.ಜನಾರ್ದನರೆಡ್ಡಿ, ಬಿ.ಶ್ರೀರಾಮುಲು, ಜಿ.ಕರುಣಾಕರರೆಡ್ಡಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ಕೈಬಿಡಲು ಸಚಿವ ಸಂಪುಟ ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಗಣಿ ಗುತ್ತಿಗೆದಾರ ಟಪಾಲ್ ನಾರಾಯಣರೆಡ್ಡಿ ಸಲ್ಲಿಸಿದ್ದ ಗಡಿ ಕಲ್ಲುಗಳ ಧ್ವಂಸ ಮತ್ತು ಗಣಿ ಗಡಿಗಳನ್ನು ಹಾಳು ಮಾಡಿರುವ ಪ್ರಕರಣವನ್ನು ಕೂಡ ಕೈಬಿಡಬೇಕು ಎಂದು ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸರ್ಕಾರಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ ತಾವು ದಾಖಲಿಸಿರುವುದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಗಿರುವ ಕಾರಣ ಸದರಿ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರ ಟಪಾಲ್ ನಾರಾಯಣರೆಡ್ಡಿ ಅವರ ಪರ ವಕೀಲ ಗುಡೇಕೋಟೆ ನಾಗರಾಜ್ ವಾದಿಸಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಜನಾರ್ದನರೆಡ್ಡಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಪ್ರತೀ ಬಾರಿಯೂ (ಸುಮಾರು 4 ಬಾರಿ) ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.
Comments
ಜನಾರ್ದನ ರೆಡ್ಡಿ ಶ್ರೀರಾಮುಲು ಗಣಿಗಾರಿಕೆ ಭೂಕಬಳಿಕೆ ಸಂಡೂರು ಜಿಲ್ಲಾಸುದ್ದಿ ಬಳ್ಳಾರಿ ಓಎಂಸಿ ನ್ಯಾಯಾಲಯ janardhana reddy illegal mining omc
Story first published: Tuesday, May 25, 2010, 12:33 [IST]