ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಜಲ್ ಗುರುನ ಗಲ್ಲಿಗೇಕೆ ಅವಸರ?

By Mrutyunjaya Kalmat
|
Google Oneindia Kannada News

GK Pillai
ನವದೆಹಲಿ, ಮೇ. 24 : ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರುನನ್ನು ನೇಣಿಗೇರಿಸಲು ಕೇಂದ್ರ ಸರಕಾರ ಅವಸರ ಮಾಡುತ್ತಿಲ್ಲ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜೆ ಕೆ ಪಿಳ್ಳೈ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೀವದಾನ ಕೋರಿ ಅಫ್ಜಲ್ ಗುರು ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿಯವರ ಬಳಿ ಇದೆ. ಈ ವಿಷಯದಲ್ಲಿ ಸರಕಾರ ಯಾವುದೇ ರೀತಿ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ. ಆವನ ಸರದಿ ಬಂದಾಗ ಕಾನೂನು ರೀತಿಯಲ್ಲಿ ಅದು ನಡೆಯಲಿದೆ ಎಂದರು. 2001 ರ ಸಂಸತ್ತಿನ ದಾಳಿಯ ಪ್ರಮುಖ ರೂವಾರಿಯಾಗಿರುವ ಅಫ್ಜಲ್ ಗುರುನನ್ನು 2006ರ ಅಕ್ಟೋಬರ್ 20ರಂದು ನೇಣಿಗೇರಿಸಬೇಕಿತ್ತು. ಆದರೆ, ಜೀವದಾನ ಕೋರಿ ರಾಷ್ಟ್ರಪತಿಯವರಿಗೆ ಗುರು ಅರ್ಜಿ ಸಲ್ಲಿಸಿದ್ದರಿಂದ ಶಿಕ್ಷೆ ನೀಡುವಲ್ಲಿ ವಿಳಂಬವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X